ಮಂಜೇಶ್ವರ: ನೆಹರೂ ಯುವ ಕೇಂದ್ರ ಕಾಸರಗೋಡು ಹಾಗೂ ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಚಿಗುರುಪಾದೆ ಇದರ ಆಶ್ರಯದಲ್ಲಿ ಒಂದು ದಿನದ ಸಮಾಜ ಸೇವೆ ಬಗ್ಗೆ ತರಬೇತಿ ಶಿಬಿರ ಇತ್ತೀಚೆಗೆ ಚಿಗುರುಪಾದೆಯಲ್ಲಿ ನಡೆಯಿತು.
ಚಿಗುರುಪಾದೆಯ ಫ್ರೆಂಡ್ಸ್ ಕ್ಲಬ್ಬಿನ ಪರಿಸರದಲ್ಲಿ ನಡೆದ ಶಿಬಿರವನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಂಶಾದ್ ಶುಕೂರ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ ಕೋಡಿ ಉಪಸ್ಥಿತರಿದ್ದರು. ತರಬೇತಿಯನ್ನು ಟಿ.ಡಿ ಸದಾಶಿವ ರಾವ್ ನಿರ್ವಹಿಸಿದರು. ಸಮಾರಂಭದಲ್ಲಿ ವಿಜಯಲಕ್ಷ್ಮಿ ಟಿ.ಆರ್, ರಾಜೇಶ್ವರಿ ಟೀಚರ್, ಯುವ ಕೇಂದ್ರದ ಸಂಯೋಜಕ ದೀಕ್ಷಿತ, ವಿನುತ್ ರಾಜ್, ಶಂಕರ ಸಿ, ಶಂಕರ ಆಳ್ವ ಉಪಸ್ಥಿತರಿದ್ದರು.


