ಕಾಸರಗೋಡು: ಪಿಲಿಕುಂಜೆಯ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ಜ.18 ಮತ್ತು 19 ರಂದು ನಡೆಯಲಿರುವ ತಿರುವಪ್ಪನ ಮಹೋತ್ಸವದ ಅಂಗವಾಗಿ ಬುಧವಾರ ಗಣಪತಿ ಹೋಮ ನಡೆಯಿತು.
ಆ ಬಳಿಕ ಗುಳಿಗನಿಗೆ ಕಲಶ ಮತ್ತು ಕೋಳಿ ಸಮರ್ಪಣೆ. ಸಂಜೆ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರ ಪುನ:ರುದ್ಧಾರ ಸಮಿತಿಯ ವತಿಯಿಂದ ಮಾಡಿದ ಕ್ಷೇತ್ರದ ಹಿತ್ತಾಳೆ ರೂಪಕಲ್ಪನೆ, ಕಳಕಪುರದ ರಾಜಾಂಗಣಕ್ಕೆ ಇಂಟರ್ಲೋಕ್, ಸಿಸಿಟಿವಿ ಕ್ಯಾಮರಾ, ಕಾಣಿಕೆ ಡಬ್ಬಿ ನವೀಕರಣ ಮುಂತಾದವುಗಳನ್ನು ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. ರಾತ್ರಿ ಪುನರ್ ಪ್ರತಿಷ್ಠಾ ವಾರ್ಷಿಕ ಉತ್ಸವದ ಅಂಗವಾಗಿ ಪೈಂಗುಟ್ಟಿ ನಡೆಯಿತು.


