HEALTH TIPS

ನಾಯ್ಕಾಪು-ಶಾಸ್ತಾರ ಸೇವಾ ಸಮಿತಿ ಸಭೆ-ಸೇವಾ ಸಮಿತಿ ಪುನಾಃರಚನೆ


        ಕುಂಬಳೆ: ನಾಯ್ಕಾಪು ಶಾಸ್ತಾರ ದೇವ ಸೇವಾ ಸಮಿತಿಯ ಮತ್ತು ಶ್ರೀಶಾಸ್ತಾರ ಬನಕ್ಕೆ ಸಂಬಂಧಪಟ್ಟ ಭಗವದ್ಭಕ್ತರ ಸಭೆಯು  ಬನದ ವಠಾರದಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸೇವಾ ಸಮಿತಿಯನ್ನು ಸರ್ವಾನುಮತದಿಂದ ಪುನರ್ ರಚಿಸಲಾಯಿತು. ಅಧ್ಯಕ್ಷರಾಗಿ ಎಚ್ ಸುಬ್ರಹ್ಮಣ್ಯ ಪ್ರಸಾದ ಹಿಳ್ಳೆಮನೆ, ಉಪಾಧ್ಯಕ್ಷರುಗಳಾಗಿ ಎಂ ಕೆ ಸುಬ್ರಹ್ಮಣ್ಯ ಭಟ್,  ಕೇಶವ ಪ್ರಸಾದ ನಾಣಿತ್ಲು, ಕೇಶವ ಮೂರ್ತಿ ಮೇಣ ಶೇಡಿಗುಳಿ, ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಶರ್ಮ ಎಂ, ಜೊತೆ ಕಾರ್ಯದರ್ಶಿಗಳಾಗಿ ದಯಾನಂದ ಎನ್, ಎಸ್ ವೆಂಕಟ್ರಮಣ ಭಟ್, ಮುರಳೀಧರ ಯಾದವ್ ನಾಯ್ಕಾಪು, ಕೋಶಾಧಿಕಾರಿಯಾಗಿ ಗುರುಮೂರ್ತಿ ಮೇಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸದಾಶಿವ ಗಟ್ಟಿ ನಾಯ್ಕಾಪು, ಅಜಯ್ ಎನ್, ಲೋಕೇಶ ಎನ್, ಶಿವಕುಮಾರ ಸುಣ್ಣಂಗುಳಿ,ಅನಿಲ್ ಕುಮಾರ್ ಎನ್, ಸುರೇಂದ್ರ ನಾಯಕ್ ಎನ್, ಗಣೇಶ ಡ್ರೈವರ್, ಉಮೇಶ ಗಟ್ಟಿ, ಭಾಸ್ಕರ ಡ್ರೈವರ್, ರವಿಚಂದ್ರ, ರಾಘವೇಂದ್ರ, ಕಿಶೋರ್ ಕುಮಾರ್, ದೇವೀದಾಸ, ದಯಾನಂದ ಹೆಗ್ಡೆ ಅವರನ್ನು ಆರಿಸಲಾಯಿತು. ಮಾ.11 ರಂದು ಕಿನ್ನಿಮಾಣಿ ಕಟ್ಟೆಯಲ್ಲಿ ನೇಮದ ಪ್ರಯಕ್ತ ನಡೆಯಲಿರುವ ಬಲಿವಾಡು ಕೂಟದ ಯಶಸ್ವಿಗಾಗಿ ಎಲ್ಲರ ಸಹಕಾರವನ್ನು ಕೋರಲು ತೀರ್ಮಾನಿಸಲಾಯಿತು. ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಶರ್ಮ ಸ್ವಾಗತಿಸಿ, ಜೊತೆಕಾರ್ಯದರ್ಶಿ ಮುರಳೀಧರ ಯಾದವ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries