ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ 10 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತಿ ನಿವಾಸಿಗಳಾದ 4 ಮಂದಿ, ಮಧೂರು, ಪೈವಳಿಕೆ ಗ್ರಾಮ ಪಂಚಾಯತಿಗಳ ತಲಾ ಇಬ್ಬರು, ಕಾಸರಗೋಡು ನಗರಸಭೆ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತಿ ನಿವಾಸಿಗಳಾದ ತಲಾ ಒಬ್ಬರು ಸೋಂಕು ಖಚಿತಗೊಂಡವರು. ಎಲ್ಲರೂ ಪುರುಷರಾಗಿದ್ದಾರೆ. ಇವರಲ್ಲಿ 7 ಮಂದಿ ಸರ್ಕಾರಿ ನಿಗಾದಲ್ಲಿ, ಮೂವರು ಮನೆಗಳಲ್ಲಿ ನಿಗಾದಲ್ಲಿದ್ದವರು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಮೊಗ್ರಾಲ್ ಪುತ್ತೂರು ನಿವಾಸಿ 59 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ 43, 40 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ನಿವಾಸಿ 30 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿಗಳಾದ 64, 27, 23, 51 ವರ್ಷದ ವ್ಯಕ್ತಿಗಳು, ಮಧೂರು ಗ್ರಾಮ ಪಂಚಾಯತಿಯ 23, 27 ವರ್ಷದ ವ್ಯಕ್ತಿಗಳು ರೋಗ ಬಾಧಿತರಾಗಿರುವರು. ಮೇ 20ರಂದು ರೋಗ ಖಚಿತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತ್ರಿಕರಿಪುರ ನಿವಾಸಿ 15 ವರ್ಷದ ವ್ಯಕ್ತಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3691 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3083 ಮಂದಿ, ಆಸ್ಪತ್ರೆಗಳಲ್ಲಿ 608 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ ಆಸ್ಪತ್ರೆಗಳಲ್ಲಿ ಮತ್ತು ಮನೆಗಳಲ್ಲಿ 322 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಭಾನುವಾರ ನೂತನವಾಗಿ 226 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 226 ಮಂದಿ ಭಾನುವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 7117 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 6105 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೇರಳ ರಾಜ್ಯದಲ್ಲಿ 61 ಮಂದಿಗೆ ಕೊರೊನಾ :
ಕೇರಳ ರಾಜ್ಯದಲ್ಲಿ ರವಿವಾರ 61 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 15ಮಂದಿ ಗುಣಮುಖರಾಗಿದ್ದಾರೆ.
ಪಾಲ್ಘಾಟ್ ಜಿಲ್ಲೆಯಲ್ಲಿ 12, ಕಾಸರಗೋಡು-10, ಕಣ್ಣೂರು-7, ಕೊಲ್ಲಂ-6, ಆಲಪ್ಪುಳ-6, ತಿರುವನಂತಪುರ-4, ಪತ್ತನಂತಿಟ್ಟ-4, ತೃಶ್ಶೂರು-3, ಮಲಪ್ಪುರಂ-3, ವಯನಾಡು-3, ಕಲ್ಲಿಕೋಟೆ-2, ಎರ್ನಾಕುಳಂ-1 ಎಂಬಂತೆ ರೋಗ ಖಾತರಿಗೊಳಿಸಲಾಗಿದೆ. ಈ ಪೈಕಿ 20 ಮಂದಿ ವಿದೇಶದಿಂದ (ಯುಎಇ-8, ಕುವೈಟ್-5, ಒಮಾನ್-4, ಸೌದಿ ಅರೇಬಿಯಾ-1, ಖತ್ತರ್-1, ಮಾಲಿ ದ್ವೀಪ-1) ಬಂದವರು. 37 ಮಂದಿ ಇತರ ರಾಜ್ಯಗಳಿಂದ (ಮಹಾರಾಷ್ಟ್ರ-20, ತಮಿಳುನಾಡು-6, ಡೆಹಲಿ-5, ಕರ್ನಾಟಕ-4, ಗುಜರಾತ್-1, ರಾಜಸ್ತಾನ-1) ಬಂದವರು. ನಾಲ್ಕು ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಪಾಲ್ಘಾಟ್ ಮತ್ತು ಕೊಲ್ಲಂ ಜಿಲ್ಲೆಯ ತಲಾ ಇಬ್ಬರಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ಚಿಕಿತ್ಸೆ ಪಡೆಯುತ್ತಿದ್ದ ಕಣ್ಣೂರು ಜಿಲ್ಲೆಯ 5 ಮಂದಿ(ಒಬ್ಬರು ಕಾಸರಗೋಡು ನಿವಾಸಿ), ಕಲ್ಲಿಕೋಟೆ-4, ಪತ್ತನಂತಿಟ್ಟ-2, ಮಲಪ್ಪುರಂ-2, ತಿರುವನಂತಪುರ-1, ಎರ್ನಾಕುಳಂ-1 ಎಂಬಂತೆ ಗುಣಮುಖರಾಗಿದ್ದಾರೆ. ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 670 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 590 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 1,34,654 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1,33,413 ಮಂದಿ ಮನೆಗಳಲ್ಲೂ, ಇನ್ಸ್ಟಿಟ್ಯೂಷನಲ್ ಕ್ವಾರೆಂಟೈನ್ನಲ್ಲಿದ್ದಾರೆ. 1241 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಭಾನುವಾರ ಶಂಕಿತ 208 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 67,371 ಮಂದಿಯ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 64,093 ಫಲಿತಾಂಶ ನೆಗೆಟಿವ್ ಆಗಿದೆ.
ಕಾಸರಗೋಡು ಜಿಲ್ಲೆಯ ಬದಿಯಡ್ಕ, ಪಿಲಿಕೋಡು ಹಾಟ್ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಂಡಿದ್ದು, ರಾಜ್ಯದಲ್ಲಿ ಒಟ್ಟು 116 ಹಾಟ್ಸ್ಪಾಟ್ಗಳಿವೆ.
ನಿಷೇಧಾಜ್ಞೆ ಉಲ್ಲಂಘನೆ : 14 ಕೇಸು ದಾಖಲು
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 14 ಕೇಸುಗಳನ್ನು ದಾಖಲಿಸಲಾಗಿದೆ. 8 ಮಂದಿಯನ್ನು ಬಂ„ಸಲಾಗಿದ್ದು, 5 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 2, ಕಾಸರಗೋಡು 2, ಬದಿಯಡ್ಕ 1, ಆದೂರು 1, ಬೇಡಗಂ 1, ಮೇಲ್ಪರಂಬ 1, ಬೇಕಲ 1, ಹೊಸದುರ್ಗ 1, ಚಿತ್ತಾರಿಕಲ್ 1, ಚಂದೇರ 1 ಕೇಸುಗಳು ದಾಖಲಾಗಿದೆ. ಈ ಆರೋಪದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2552 ಕೇಸುಗಳನ್ನು ದಾಖಲಿಸಲಾಗಿದೆ. 3208 ಮಂದಿಯನ್ನು ಬಂಧಿಸಲಾಗಿದ್ದು, 1091 ವಾಹನಗಳನ್ನು ವಶಪಡಿಸಲಾಗಿದೆ.
ಮಾಸ್ಕ್ ಧರಿಸದ 188 ಮಂದಿ ವಿರುದ್ಧ ಕೇಸು :
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 188 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 3336 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ಹೇರಲಾಗಿದೆ.