ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಮೂವರಿಗೆ ಹಾಗು ಕೊಲ್ಲಿಯಿಂದ ಬಂದ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಮೇ 14 ರಂದು ಪೂನಾದಿಂದ ಕಾರಿನಲ್ಲಿ ತಲಪಾಡಿಗೆ ಬಂದ 31 ಹರೆಯದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಮೇ 17 ರಂದು ಮಹಾರಾಷ್ಟ್ರದಿಂದ ಬಸ್ನಲ್ಲಿ ಬಂದ 42 ರ ಹರೆಯನ ಪೈವಳಿಕೆ ಪಂಚಾಯತ್ ನಿವಾಸಿ, ಮೇ 24 ರಂದು ಮಹಾರಾಷ್ಟ್ರದಿಂದ ಬಸ್ನಲ್ಲಿ ಬಂದ 63 ವರ್ಷದ ಬದಿಯಡ್ಕ ಪಂಚಾಯತ್ ನಿವಾಸಿ, ಮೇ 17 ರಂದು ದುಬೈಯಿಂದ ಬಂದ 58 ವರ್ಷದ ಉದುಮ ಪಂಚಾಯತ್ ನಿವಾಸಿಗಳಿಗೆ ರೋಗ ಬಾ„ಸಿದೆ. ಉಕ್ಕಿನಡ್ಕದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಪೈವಳಿಕೆ ಪಂಚಾಯತ್ ನಿವಾಸಿ ಗುಣಮುಖರಾಗಿದ್ದಾರೆ. ಇವರು ಮೇ 15 ರಂದು ಮಹಾರಾಷ್ಟ್ರದಿಂದ ಬಂದಿದ್ದರು. ಕಾಸರಗೋಡು ಜಿಲ್ಲೆಯ 70 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3665 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3081 ಮಂದಿ, ಆಸ್ಪತ್ರೆಗಳಲ್ಲಿ 584 ಮಂದಿ ನಿಗಾದಲ್ಲಿದ್ದಾರೆ. 238 ಮಂದಿ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಶುಕ್ರವಾರ 485 ಮಂದಿ ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 6751 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5965 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೇರಳದಲ್ಲಿ 62 ಮಂದಿಗೆ ಸೋಂಕು:
ರಾಜ್ಯದಲ್ಲಿ ಶುಕ್ರವಾರ 62 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದರಲ್ಲಿ 33 ಮಂದಿ ವಿದೇಶದಿಂದ ಬಂದವರು. ಇತರ ರಾಜ್ಯಗಳಿಂದ ಬಂದ 23(ತಮಿಳುನಾಡು-10, ಮಹಾರಾಷ್ಟ್ರ-10, ಕರ್ನಾಟಕ-1, ದೆಹಲಿ-1, ಪಂಜಾಬ್-1) ಸಂಪರ್ಕದಲ್ಲಿ ಒಬ್ಬರಿಗೆ, ಸೆರೆಮನೆಯಲ್ಲಿರುವ ಇಬ್ಬರಿಗೆ, ಒಬ್ಬರು ಆರೋಗ್ಯ ಕಾರ್ಯಕರ್ತನಿಗೆ ರೋಗ ದೃಢೀಕರಿಸಲಾಗಿದೆ. ಇದಲ್ಲದೆ ಏರ್ ಇಂಡಿಯಾ ಕ್ಯಾಬಿನ್ ಕ್ರೂವ್ನ ಇಬ್ಬರಿಗೆ ರೋಗ ಬಾಧಿಸಿದೆ.
ಪಾಲ್ಘಾಟ್-14, ಕಣ್ಣೂರು-7, ತೃಶ್ಶೂರು-6, ಪತ್ತನಂತಿಟ್ಟ-6, ಮಲಪ್ಪುರಂ-5, ತಿರುವನಂತಪುರ-5, ಕಾಸರಗೋಡು-4, ಎರ್ನಾಕುಳಂ-4, ಆಲಪ್ಪುಳ-3, ವಯನಾಡು-2, ಕೊಲ್ಲಂ-2, ಕೋಟ್ಟಯಂ-1, ಇಡುಕ್ಕಿ-1, ಕಲ್ಲಿಕೋಟೆ-1 ಎಂಬಂತೆ ರೋಗ ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 10 ಮಂದಿ ಗುಣಮುಖರಾಗಿದ್ದಾರೆ. ವಯನಾಡು-5, ಕಲ್ಲಿಕೋಟೆ-2, ಕಣ್ಣೂರು-1, ಮಲಪ್ಪುರಂ-1 ಮತ್ತು ಕಾಸರಗೋಡು -1 ಎಂಬಂತೆ ಗುಣಮುಖರಾಗಿದ್ದಾರೆ. ರೋಗ ಬಾ„ಸಿ ಕೋಟ್ಟಯಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಿರುವಲ್ಲ ನಿವಾಸಿ ಜೋಷಿ ಸಾವಿಗೀಡಾದರು.
ಈ ವರೆಗೆ ರಾಜ್ಯದಲ್ಲಿ ಒಟ್ಟು 1150 ಮಂದಿಗೆ ರೋಗ ದೃಢಿಕರಿಸಲಾಗಿದೆ. ಇದೀಗ 557 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಶಂಕಿತ 231 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 62746 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಲಭ್ಯ 60448 ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದ 274 ಮಂದಿ ವಿರುದ್ಧ ಕೇಸು:
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 274 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ಆರೋಪದಲ್ಲಿ ಒಟ್ಟು 3551 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ: 57 ಮಂದಿಗೆ ಕೇಸು
ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 57 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 79 ಮಂದಿಯನ್ನು ಬಂಧಿಸಲಾಗಿದ್ದು, 48 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 3, ಕಾಸರಗೋಡು 6, ವಿದ್ಯಾನಗರ 2, ಬದಿಯಡ್ಕ 2, ಬೇಡಗಂ 3, ಮೇಲ್ಪರಂಬ 13, ಬೇಕಲ 2, ಅಂಬಲತ್ತರ 3, ಹೊಸದುರ್ಗ 1, ನೀಲೇಶ್ವರ 2, ಚಂದೇರ 5, ಚೀಮೇನಿ 4, ವೆಳ್ಳರಿಕುಂಡ್ 4, ಚಿತ್ತಾರಿಕಲ್ 5 ಕೇಸುಗಳು ದಾಖಲಾಗಿದೆ. ಈ ಆರೋಪದಲ್ಲಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2520 ಕೇಸುಗಳು ದಾಖಲಾಗಿವೆ. 3176 ಮಂದಿಯನ್ನು ಬಂಧಿಸಲಾಗಿದ್ದು, 1076 ವಾಹನಗಳನ್ನು ವಶಪಡಿಸಲಾಗಿದೆ.