ಮಂಜೇಶ್ವರ: ಮಂಜೇಶ್ವರದ ಉದ್ಯಾವರದ ಫ್ಲಾಟ್ ಒಂದರ ಮಲಿನ ಜಲ ಮತ್ತು ತ್ಯಾಜ್ಯವನ್ನು ಇಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ತಂದುಹಾಕಿದ ಆರೋಪದಲ್ಲಿ ಆರೋಪಿಗಳ ವಿರುದ್ಧ ಮಂಜೇಶ್ವರ ಗ್ರಾಮಪಂಚಾಯತಿ ಕ್ರಮ ಕೈಗೊಂಡಿದೆ. ಈ ಕ್ರಮದಿಂದ ಪ್ರದೇಶದಲ್ಲಿ ದುಗರ್ಂಧ ಹರಡುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯಿದೆ. ಕೊರೋನಾ ಪ್ರತಿರೋ ಚಟುಟವಿಕೆ ನಡೆಯುತ್ತಿರುವ ನಡುವೆ ಇಂಥಾ ಅಕ್ರಮ ನಡೆಸಿದ ಆರೋಪದಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಗ್ರಾಮಪಂಚಾಯತಿ ಕಾರ್ಯದರ್ಶಿ ತಿಳಿಸಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ, ಹೆಲ್ತ್ ಇನ್ಸ್ ಪೆಕ್ಟರ್, ಜ್ಯೂನಿಯರ್ ವರಿಷ್ಠಾಧಿಕಾರಿ, ವಿಭಾಗ ಗುಮಾಸ್ತ ಅವರ ನೇತೃತ್ವದಲ್ಲಿ ತಂಡ ತಪಾಸಣೆ ನಡೆಸಿತ್ತು.

