ಕಾಸರಗೋಡು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಗಳಲ್ಲಿ ಜನನಿಭಿಡತೆ ನಡೆಸದೆ ಎಲ್ಲರೂ ಸಹಕಾರ ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಕಾಸರಗೋಡು, ಕಾಂಞಂಗಾಡ್ ನಗರಸಭೆ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳ ಜನ ಸಾಧಾರಣ ಕಾಯಿಲೆಗಳ ಚಿಕಿತ್ಸೆಗಾಗಿ ಸ್ಥಳೀಯ ಆರೋಗ್ಯ ಕೇಂದ್ರಗಳನ್ನು ಆಶ್ರಯಿಸುವಂತೆ ಅವರು ಸಲಹೆ ಮಾಡಿದ್ದಾರೆ. ಪರಿಣತ ಚಿಕಿತ್ಸೆ ಅಗತ್ಯವಿರುವ ಮಂದಿ ವೈದ್ಯಾಧಿಕಾರಿ ಅವರ ಶಿಫಾರಸು ಪ್ರಕಾರ ಮಾತ್ರ ಜಿಲ್ಲಾ, ಜನರಲ್ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವಂತೆ ಅವರು ಹೇಳಿದರು.


