ಮಂಜೇಶ್ವರ: ಆರೋಗ್ಯ ಕ್ಷೇತ್ರವು ಇಂದು ಪ್ರತಿ ಜೀವಿಯ ಭಾಗ್ಯವಾಗಿ ಪರಿಗಣಿಸಲ್ಪಡುತ್ತಿದೆ. ಮಹಾಮಾರಿ ಕೋವಿಡ್ ರೋಗ ಜಗತ್ತನ್ನೇ ಅಲ್ಲೋಲ್ಲ ಕಲ್ಲೋಲ ಮಾಡುತ್ತಿದೆ. ಜಗತ್ತಿನ ಬಲಿಷ್ಟ ರಾಷ್ಟ್ರಗಳೇ ಕೊರೊನ ರೋಗದಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಜಾಗೃತಿಯೊಂದಿಗೆ ಜನತೆಗೆ ಮಾಸ್ಕ್ ವಿತರಿಸುವ ಬಿಜೆಪಿ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಮತ್ತು ಪ್ರಶಂಸನೀಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ ಹೇಳಿದರು.
ಬಿಜೆಪಿ ವತಿಯಿಂದ ಕಾಸರಗೋಡು ಜಿಲ್ಲೆ ರೂಪಿಕರಣ ದಿನಾಚರಣೆಯ ಭಾಗವಾಗಿ ವರ್ಕಾಡಿ ಪಂಚಾಯತಿ ಮಟ್ಟದ ಮಾಸ್ಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಲಾಕ್ ಪಂಚಾಯತಿ ಸದಸ್ಯ ಸದಾಶಿವ ವರ್ಕಾಡಿ, ಮುಖಂಡರಾದ ವಿಜಯ್ ವರ್ಕಾಡಿ, ವಿವೇಕಾನಂದ ಶೆಟ್ಟಿ, ರತೇಶ್, ಸದಾಶಿವ ನಾಯ್ಕ್, ಭಾಸ್ಕರ ಪೆÇಯ್ಯ ಮೊದಲಾದವರು ಉಪಸ್ಥಿತರಿದ್ದರು. ಮನೆಮನೆಗಳಿಗೆ ಮಾಸ್ಕ್ ವಿತರಿಸಲಾಯಿತು.


