ಉಪ್ಪಳ: ಕೇಂದ್ರ ಸರ್ಕಾರದ ಖಾಸಗೀಕರಣ ಯೋಜನೆ ಸಹಿತ ವಿವಿಧ ಜನ ವಿರುದ್ದ ಧೋರಣೆಗಳಿಗೆ ಎದುರಾಗಿ ಜನತಾದಳ(ಎಸ್) ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಉಪ್ಪಳ ಅಂಚೆ ಕಚೇರಿ ಪರಿಸರದಲ್ಲಿ ಪ್ರತಿಭಟನಾ ಧರಣಿ ಗುರುವಾರ ನಡೆಯಿತು.
ಧರಣಿಯನ್ನು ಜೆಡಿಎಸ್ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಕೆ.ಎ.ಖಾದರ್ ಉದ್ಘಾಟಿಸಿದರು. ಎಸ್.ಎಂ.ಎ.ತಂಙಳ್, ಹಮೀದ್ ಕೋಸ್ಮಾಸ್, ಶ್ರೀಧರ ಬೆಂಗರೆ, ಇಂತಿಕ್ಕಾಪ್ ಆಲಂ, ಖಾದರ್ ಸಾಹಿಬ್ ಮೊದಲಾದವರು ಉಪಸ್ಥಿತರಿದ್ದು ಧರಣಿಯಲ್ಲಿ ಮಾತನಾಡಿದರು.