HEALTH TIPS

ಲಡಾಖ್ ಲಡಾಯಿ: ಸತತ 3 ನೇ ದಿನ ಭಾರತ-ಚೀನಾ ಸೇನಾ ಮಾತುಕತೆ

 
     ಲಡಾಖ್: ಈಶಾನ್ಯ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ನಿನ್ನೆಯೂ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. ಉಭಯ ಸೇನೆಯಲ್ಲಿರುವ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳು ಸಭೆ ನಡೆಸಿದ್ದು ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದರ ಬಗ್ಗೆ ಚರ್ಚಿಸಿದ್ದಾರೆ.
      ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನೆ ನಡುವೆ ಘರ್ಷಣೆ ಉಂಟಾಗಿ ಜೂ.15 ರಂದು ಭಾರತದ ಕರ್ನಲ್ ಹಾಗೂ 19 ಯೋಧರು ಹುತಾತ್ಮರಾಗಿದ್ದರು. 18 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.
       ಜೂ.16 (ಮಂಗಳವಾರ) ಜೂ.-17 (ಬುಧವಾರ)ವೂ ಭಾರತ-ಚೀನಾ ನಡುವೆ ಮಾತುಕತೆ ನಡೆದಿತ್ತು. ಬುಧವಾರದಂದು ನಡೆದ ಚರ್ಚೆಯಲ್ಲಿ ಗಾಲ್ವಾನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿತ್ತು. ಮೊನ್ನೆ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ "ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ಪ್ರತಿ ಉತ್ತರ ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries