ಕಾಸರಗೋಡು: ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಶಿಸ್ತು ಮತ್ತು ಸ್ನೇಹವನ್ನು ಬೋಧಿಸುವ ಶಿಕ್ಷಕರು ಕೋವಿಡ್ ತುರ್ತಿನ ಇಂದು ರೋಗನಿರೋಧಕ ಶಕ್ತಿಯನ್ನು ಎದುರಿಸಲು ಹೊಸ ಕಾರ್ಯಾಚರಣೆಯೊಂದಿಗೆ ಸಮಾಜದಲ್ಲಿ ಕಾಣಿಸಿಕೊಳ್ಳುವ ಹೊಸ ಯೋಜನೆಯೊಂದು ಜಾರಿಗೆ ಬರಲಿದೆ.
ಕೋವಿಡ್ ಸೋಂಕು ಸಂಪರ್ಕ ಮೂಲಕ ಹರಡುವುದನ್ನು ತಡೆಯಲು ಕಾಸರಗೋಡು ಜಿಲ್ಲಾಡಳಿತ ಕಠಿಣ ನಿಯಮಗಳನ್ನು ಜಾರಿಗೊಳಿಸಲಿದೆ. ಮಾಶ್ ಎಂಬ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರು ಈ ಚಟುವಟಿಕೆಗಳನ್ನು ಜಿಲ್ಲಾಡಳಿತದೊಂದಿಗೆ ಮುನ್ನಡೆಸಲಿದ್ದಾರೆ. ಮೂರು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ವಾರಕ್ಕೊಮ್ಮೆ ವಿಶೇಷ ತಂಡಗಳನ್ನು ವಾರ್ಡ್ಗಳಿಗೆ ನಿಯೋಜಿಸಲಾಗುವುದು: ಕೈಗಳನ್ನು ಸ್ವಚ್ಚ ಗೊಳಿಸುವುದು, ಮಾಸ್ಕ್ ಗಳನ್ನು ಧರಿಸುವುದು ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಪ್ರಮುಖ ಅಂಶಗಳಾಗಿವೆ. ಈ ಮೂಲಕ ಬ್ರೇಕ್ ದಿ ಚೈನ್ ಅಭಿಯಾನದ ಬಗ್ಗೆ ಶಿಕ್ಷಕರು ಜಾಗೃತಿ ಮೂಡಿಸಲಿದ್ದಾರೆ. 1973 ರ ಕ್ರಿಮಿನಲ್ ಪೆÇ್ರಸೀಜರ್ ಆಕ್ಟ್ (ಸಿಆರ್ಪಿಸಿ) ಯನ್ನು ಉಲ್ಲಂಘಿಸುವವರನ್ನು ಬಂಧಿಸುವ ಅಧಿಕಾರವನ್ನು ಈ ಶಿಕ್ಷಕರಿಗೆ ನೀಡಲು ಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಮುನದಸೂಚನೆಯನ್ನೂ ನೀಡಿರುವರು. ರಾಜ್ಯದಲ್ಲಿ ಮೊದಲ ಬಾರಿಗೆ, ಸೇವಾ ಮನೋಭಾವದಿಂದ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಿಗೆ ಶಿಕ್ಷಣ ನೀಡಲು ಜಿಲ್ಲಾಡಳಿತ ಸನ್ನದ್ದವಾಗಿದೆ.
ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಅವರ ನಿರ್ದೇಶನದಲ್ಲಿ ಶಿಕ್ಷಣ ಉಪನಿರ್ದೇಶಕ ಕೆ.ಎಸ್.ಪುಷ್ಪಾ ಅವರ ಸಹಕಾರದೊಂದಿಗೆ ಶಿಕ್ಷಕರು ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವರು. ಪ್ರತೀ ವಾರ್ಡ್ ಗಳಲ್ಲೂ ಶಿಕ್ಷಕರ ಉಪಸ್ಥಿತಿಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ರೋಗ ಹರಡುವುದನ್ನು ತಡೆಗಟ್ಟುವ ಉದ್ದೇಶವನ್ನು ಮಾಶ್ ಹೊಂದಿದೆ. ಬ್ರೇಕ್ ದಿ ಚೈನ್ನ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಫೆÇೀಟೋಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ವಾಟ್ಸಾಪ್ 8590684023 ಗೆ ಕಳುಹಿಸುತ್ತಾರೆ. ಕಾರ್ಯಕ್ರಮವನ್ನು ಮುನ್ನಡೆಸುವ ಎಲ್ಲ ಶಿಕ್ಷಕರ ಮೊಬೈಲ್ ಸಂಖ್ಯೆಯನ್ನು ಜಿಲ್ಲಾಡಳಿತ ಈಗಾಗಲೇ ಸಂಗ್ರಹಿಸಿದೆ.
ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿರುವುದನ್ನು ಈಗಾಗಲೇ ಗಮನಿಸಲಾಗಿದೆ. ಕೆಲವು ಅಂಗಡಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮಾಸ್ಕ್ ಧರಿಸದೆ ಅಥವಾ ಅಂತರ ಕಾಯ್ದುಕೊಳ್ಳದೆ ಒಟ್ಟುಗೂಡುತ್ತಿರುವುದೂ ಕಂಡುಬಂದಿದೆ. ಅಂತಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿರುವರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವಾರ್ಡ್ಗಳಲ್ಲಿ ಶಿಕ್ಷಕರ ಮ್ಯಾಶ್ ಸೇವೆಯನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿರುವರು.



