ತಿರುವನಂತಪುರ: ಜೂನ್ನಲ್ಲಿ ಯಾವ ಕಾರಣಕ್ಕೂ ಶಾಲೆಗಳ ಪುನರಾರಂಭದ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸೋಮವಾರ ಆಯೋಜಿಸಲಾಗಿದ್ದ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ ನಂತರ ಶಾಲೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಸೋಮವಾರ ರಾಜ್ಯಾದ್ಯಂತ 57 ಕೊರೊನಾ ಪ್ರಕರಣ ದೃಢಪಟ್ಟಿದೆ. ತಿರುವನಂತಪುರ 3, ಕೊಲ್ಲಂ 5, ಪತ್ತನಂತಿಟ್ಟು 4, ಅಲಪ್ಪುಳ 2, ಇಡುಕ್ಕಿ 1, ಎರ್ನಾಕುಳಂ 3, ತ್ರಿಶೂರ್ 9, ಮಲಪ್ಪುರಂ 14, ಪಾಲಕ್ಕಾಡ್ 2, ಕಾಸರಗೋಡು 14 ಮಂದಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 55 ಮಂದಿ ರಾಜ್ಯದ ಹೊರಗಿನಿಂದ ಆಗಮಿಸಿದವರು ಎಂದು ಮಾಹಿತಿ ನೀಡಿದರು.
ಇಂದು ಲಭ್ಯವಾದ ಕೊರೊನಾ ಪರೀಕ್ಷೆಯಲ್ಲಿ 18 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ ಹತ್ತು ಆಗಿದ್ದು ಈವರೆಗೆ ರಾಜ್ಯದಲ್ಲಿ 1326 ಜನರಲ್ಲಿ ರೋಗ ಪತ್ತೆಯಾಗಿದೆ ಎಂದರು.
ರಾಜ್ಯದಲ್ಲಿ 139661 ಕೋವಿಡ್ ನಿರೀಕ್ಷಣೆಯಲ್ಲಿ ಕ್ವಾರಂಟೈನ್ ಗೊಳಪಟ್ಟಿದ್ದಾರೆ. ಮನೆಗಳು ಮತ್ತು ಸರ್ಕಾರಿ ಕೇಂದ್ರಗಳಲ್ಲಿ 138397 ಜನರಿದ್ದಾರೆ. 1246 ಜನರು ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 174 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ 68979 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. 65273 ಪ್ರಕರಣಗಳು ಖಚಿತವಾಗಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದ್ಯತೆಯ ವಿಭಾಗದ ಒಟ್ಟು 13470 ಮಾದರಿಗಳನ್ನು ಸಂಗ್ರಹಿಸಲಾಗಿದೆ. 13037 ನಕಾರಾತ್ಮಕವಾಗಿದೆ ಎಂದು ಮಾಹಿತಿ ನೀಡಿರುವರು.