ಕಾಸರಗೋಡು: ಬೇಕಲ ಪೆÇಲೀಸರು ಹುಡುಕಾಟ ನಡೆಸುತ್ತಿರುವ, ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರ ಸುಳಿವು ನೀಡುವವರಿಗೆ 2 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಬೇಕಲ ಪೆÇಲೀಸ್ ಠಾಣೆಯ ಕ್ರೈಂ ನಂಬ್ರ 38/2018 ಕೊಲೆ ಪ್ರಕರಣದ ಆರೋಪಿ, ಕೇರಳ- ಕರ್ನಾಟಕ ರಾಜ್ಯಗಳ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈಗ ತಲೆಮರೆಸಿಕೊಂಡಿರುವ ಸುಳ್ಯ ಅಜ್ಜಾವರ ನಿವಾಸಿ ಮುಹಮ್ಮದ್ ಅವರ ಪುತ್ರ ಅಬ್ದುಲ್ ಅಝೀಝ್ ಆಲಿಯಾಸ್ ಕರ್ನಾಟಕ ಅಝೀಜ್ ಎಂಬಾತನ ಕುರಿತು ಸುಳಿವು ನೀಡುವವರಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು. ಮಾಹಿತಿ ನೀಡುವವರ ವಿಚಾರವನ್ನು ಗೌಪ್ಯ ವಾಗಿರಿಸಲಾಗುವುದು ಎಂದು ಹಿರಿಯ ಪೆÇಲೀಸ್ ಮೂಲಗಳು ತಿಳಿಸಿವೆ.


