ತಿರುವನಂತಪುರ: ರಾಜತಾಂತ್ರಿಕ ಸಾಮಗ್ರಿಗಳ ಬ್ಯಾಗೇಜ್ ಒಳಗಡೆ ಅಕ್ರಮ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಉನ್ನತ ದರ್ಜೆಯ ಅಧಿಕಾರಿಯನ್ನು ಕಸ್ಟಮ್ಸ್ ಪ್ರಶ್ನಿಸಿ ವಿವರ ಕಲೆಹಾಕಿದ್ದು ಸರ್ಕಾರದ ಐಟಿ ಕಾರ್ಯದರ್ಶಿಯಾಗಿದ್ದ ಶಿವಶಂಕರ್ ಅವರಿಂದ ವಿಷಯ ಕಲೆಹಾಕಿದೆ. ಮಂಗಳವಾರ ಸಂಜೆ 4 ರಿಂದ ಆರಂಭಗೊಂಡ ವಿಚಾರಣೆ ಮುಂಜಾನೆ ಮುಂಜಾನೆ 3 ರ ತನಕ ನಡೆಯಿತೆಂದು ತಿಳಿದುಬಂದಿದೆ. ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರನ್ ಅವರನ್ನು ಪೂಜಪ್ಪುರಾದ ತಮ್ಮ ಮನೆಗೆ ಕರೆದೊಯ್ದ ಒಂಬತ್ತು ಗಂಟೆಗಳ ಕಾಲ ನಡೆಸಿದ ವಿಚಾರಣೆಯಲ್ಲಿ ಕಸ್ಟಮ್ಸ್ ನಿರ್ಣಾಯಕ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಹೊಂದಿರುವ ಬ್ಯಾಗೇಜ್ ತಲಪಬೇಕಾದವರ ಕೈಸೇರುವ ಮಧ್ಯೆ ಸುರಕ್ಷಿತತೆಗಾಗಿ ಸ್ವತಃ ಎಂ.ಶಿವಶಂಕರ್ ವಿವಿಧ ರೀತಿಯಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ತನಿಖಾ ತಂಡಕ್ಕೆ ಮಾಹಿತಿ ನೀಡಲಾಯಿತು. ವರದಿಗಳ ಪ್ರಕಾರ, ಶಿವಶಂಕರ್ ಅವರು ಬಂಧಿತ ಪ್ರಧಾನ ಆರೋಪಿ ಸ್ವಪ್ನಾ ಅವರ ಸಹೋದ್ಯೋಗಿ ಮತ್ತು ಸರಿತ್ ಅವರ ಸ್ನೇಹಿತ ಎಂದು ಹೇಳಿದ್ದಾರೆ. ಈ ಪ್ರಕರಣದ ಆರೋಪಿ ಸಪ್ನಾಳನ್ನು ತಾನು ನಾಲ್ಕು ವರ್ಷಗಳಿಂದ ತಿಳಿದಿದ್ದೇನೆ ಮತ್ತು ಹಲವಾರು ಬಾರಿ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಸ್ಟಮ್ಸ್ ಆಯುಕ್ತರು ಸೇರಿದಂತೆ ಅಧಿಕಾರಿಗಳು ಎಂ.ಶಿವಶಂಕರ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಲ್ಲಿ ವಿಚಾರಣೆ ವೇಳೆ ನಿರ್ಣಾಯಕ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಸಂಜೆ 4 ಗಂಟೆ ಸುಮಾರಿಗೆ ಎಂ.ಶಿವಶಂಕರ್ ಅವರ ಮನೆಗೆ ಆಗಮಿಸಿದರು. ಬಳಿಕ ಅವರನ್ನು ಕಚೇರಿಗೆ ಕರೆದು ಪ್ರಶ್ನಿಸಲಾಯಿತು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ಆರೋಪಿಗಳೊಂದಿಗೆ ಎಂ.ಶಿವಶಂಕರ್ ಪರಿಚಯವಾಗಿದ್ದಾರೆ ಎಂಬ ಅಂಶದ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು. ಕೆಲವು ಮಾಧ್ಯಮಗಳು ಆರೋಪಿ ಮತ್ತು ಆತನ ನಡುವಿನ ದೂರವಾಣಿ ಕರೆಗಳ ವಿವರಗಳನ್ನು ಸಹ ಬಹಿರಂಗಪಡಿಸಿದ್ದವು. ಸ್ವಪ್ನಾ ನೇಮಕದಲ್ಲಿ ಎಂ.ಶಿವಶಂಕರ್ ಅವರ ಪಾತ್ರವನ್ನು ಕಸ್ಟಮ್ಸ್ ಪರಿಶೀಲಿಸುತ್ತಿದೆ. ಆದರೆ, ಈ ಪ್ರಕರಣದಲ್ಲಿ ಎಂ.ಶಿವಶಂಕರ್ ಭಾಗಿಯಾಗಿರುವುದನ್ನು ತನಿಖಾ ತಂಡ ಖಚಿತಪಡಿಸಿಲ್ಲ.
ಪ್ರಕರಣದ ಆರೋಪಿಗಳೊಂದಿಗಿನ ನಿಕಟ ಒಡನಾಟ ಖಚಿತವಾದ ನಂತರ ರಾಜ್ಯ ಸರ್ಕಾರ ಅವರನ್ನು ಒಂದು ವಾರದ ಹಿಂದೆ ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿತ್ತು. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮನವರಿಕೆಯಾಗದ ಹೊರತು ಹಿರಿಯ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಘಟನೆಗಳ ವಿಚಾರಣೆಗಳನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದೂ ಮುಖ್ಯಮಂತ್ರಿ ತಿಳಿಸಿದರು. ಈ ಪ್ರಕರಣದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಪಾತ್ರ ಸ್ಪಷ್ಟವಾದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿರುವರು.
ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಹೊಂದಿರುವ ಬ್ಯಾಗೇಜ್ ತಲಪಬೇಕಾದವರ ಕೈಸೇರುವ ಮಧ್ಯೆ ಸುರಕ್ಷಿತತೆಗಾಗಿ ಸ್ವತಃ ಎಂ.ಶಿವಶಂಕರ್ ವಿವಿಧ ರೀತಿಯಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ತನಿಖಾ ತಂಡಕ್ಕೆ ಮಾಹಿತಿ ನೀಡಲಾಯಿತು. ವರದಿಗಳ ಪ್ರಕಾರ, ಶಿವಶಂಕರ್ ಅವರು ಬಂಧಿತ ಪ್ರಧಾನ ಆರೋಪಿ ಸ್ವಪ್ನಾ ಅವರ ಸಹೋದ್ಯೋಗಿ ಮತ್ತು ಸರಿತ್ ಅವರ ಸ್ನೇಹಿತ ಎಂದು ಹೇಳಿದ್ದಾರೆ. ಈ ಪ್ರಕರಣದ ಆರೋಪಿ ಸಪ್ನಾಳನ್ನು ತಾನು ನಾಲ್ಕು ವರ್ಷಗಳಿಂದ ತಿಳಿದಿದ್ದೇನೆ ಮತ್ತು ಹಲವಾರು ಬಾರಿ ಕರೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಸ್ಟಮ್ಸ್ ಆಯುಕ್ತರು ಸೇರಿದಂತೆ ಅಧಿಕಾರಿಗಳು ಎಂ.ಶಿವಶಂಕರ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಲ್ಲಿ ವಿಚಾರಣೆ ವೇಳೆ ನಿರ್ಣಾಯಕ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಸಂಜೆ 4 ಗಂಟೆ ಸುಮಾರಿಗೆ ಎಂ.ಶಿವಶಂಕರ್ ಅವರ ಮನೆಗೆ ಆಗಮಿಸಿದರು. ಬಳಿಕ ಅವರನ್ನು ಕಚೇರಿಗೆ ಕರೆದು ಪ್ರಶ್ನಿಸಲಾಯಿತು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ಆರೋಪಿಗಳೊಂದಿಗೆ ಎಂ.ಶಿವಶಂಕರ್ ಪರಿಚಯವಾಗಿದ್ದಾರೆ ಎಂಬ ಅಂಶದ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು. ಕೆಲವು ಮಾಧ್ಯಮಗಳು ಆರೋಪಿ ಮತ್ತು ಆತನ ನಡುವಿನ ದೂರವಾಣಿ ಕರೆಗಳ ವಿವರಗಳನ್ನು ಸಹ ಬಹಿರಂಗಪಡಿಸಿದ್ದವು. ಸ್ವಪ್ನಾ ನೇಮಕದಲ್ಲಿ ಎಂ.ಶಿವಶಂಕರ್ ಅವರ ಪಾತ್ರವನ್ನು ಕಸ್ಟಮ್ಸ್ ಪರಿಶೀಲಿಸುತ್ತಿದೆ. ಆದರೆ, ಈ ಪ್ರಕರಣದಲ್ಲಿ ಎಂ.ಶಿವಶಂಕರ್ ಭಾಗಿಯಾಗಿರುವುದನ್ನು ತನಿಖಾ ತಂಡ ಖಚಿತಪಡಿಸಿಲ್ಲ.
ಪ್ರಕರಣದ ಆರೋಪಿಗಳೊಂದಿಗಿನ ನಿಕಟ ಒಡನಾಟ ಖಚಿತವಾದ ನಂತರ ರಾಜ್ಯ ಸರ್ಕಾರ ಅವರನ್ನು ಒಂದು ವಾರದ ಹಿಂದೆ ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿತ್ತು. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮನವರಿಕೆಯಾಗದ ಹೊರತು ಹಿರಿಯ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಘಟನೆಗಳ ವಿಚಾರಣೆಗಳನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದೂ ಮುಖ್ಯಮಂತ್ರಿ ತಿಳಿಸಿದರು. ಈ ಪ್ರಕರಣದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಪಾತ್ರ ಸ್ಪಷ್ಟವಾದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿರುವರು.


