ಬದಿಯಡ್ಕ: ಕೋವಿಡ್ ಕಾಲಘಟ್ಟದ ಸವಾಲುಗಳ ಮಧ್ಯೆ ಯುವ ಸಮೂಹ ವ್ಯರ್ಥ ಕಾಲಕ್ಷೇಪಗಳಲ್ಲಿ ವ್ಯಸ್ತರಾಗುತ್ತಿದ್ದು ಕ್ಲೇಶಕರವಾಗಿದೆ. ಈ ಹಿನ್ನೆಲೆಯಲ್ಲಿ ಪರಂಪರೆ, ಆಧ್ಯಾತ್ಮಿಕ ಅರಿವಿನ ವಿಸ್ತರಣೆಗೆ ಸೀಮಿತ ಅವಧಿಯ ವೇದ ಶಿಕ್ಷಣ ವ್ಯವಸ್ಥೆಗೆ ರೂಪು ನೀಡಲಾಗಿದೆ.
ಪೆರಡಾಲ ಪರಿಸರ ಕೇಂದ್ರೀಕರಿಸಿ ಆಸಕ್ತ ಉಪವೀತರಾದ ವಟುಗಳು, ಯುವಕರು ಹಾಗೂ ಹಿರಿಯರೂ ಅರ್ಜಿಸಲ್ಲಿಸಬಹುದು. ಸೀಮಿತ ಸೀಟ್ ಗಳು ಮಾತ್ರ ಲಭ್ಯವಿದ್ದು ಜು.28 ರ ಮೊದಲು ಅರ್ಜಿ ಸಲ್ಲಿಸಬೇಕು.
ದೇವರ ಪೂಜೆ, ನವಗ್ರಹ ಪೂಜೆ, ಅಗ್ನಿಮುಖ ವಿಷಯಗಳಲ್ಲಿ ನುರಿತ ತರಬೇತುದಾರರು ತರಗತಿ ನಡೆಸುವರು. ಕೋವಿಡ್ ಮಾನದಂಡಗಳಿಗನುಸಾರವಾಗಿ ತರಗತಿಗಳಿರಲಿವೆ.
ಆಸಕ್ತರು ಮೊ.ಸಂ.9447439450(ಕೃಷ್ಣಮೂರ್ತಿ ಪುದುಕೋಳಿ), 9746700415(ಶಿವರಾಮ ಭಟ್ ಪೆರಡಾಲ) ವಾಟ್ಸ್ ಆಫ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.


