HEALTH TIPS

ಜನರು ಮರೆಯಲೆತ್ನಿಸುವ ಮಧ್ಯೆ ಮತ್ತೆ ಕೋವಿಡ್ ಪ್ರಕೋಪದತ್ತ-ಇಂದು ಕೇರಳದಲ್ಲಿ 2476 ಮಂದಿಗೆ ಸೋಂಕು ದೃಢ-ಕಾಸರಗೋಡು-101

    

         ತಿರುವನಂತಪುರ: ಕಳೆದ ಆರು ತಿಂಗಳುಗಳಿಂದ ಕೋವಿಡ್ ಸೋಂಕಿನ ಕಾರಣ ಸಮತೋಲನ ತಪ್ಪಿದ ಜನಸಾಮಾನ್ಯರ ನಿತ್ಯ ಜೀವನ ಇದೀಗ ಮತ್ತೆ ಚಿಗುರೊಡೆಯುತ್ತಿದ್ದು, ಈ ಮಧ್ಯೆ ರಾಜ್ಯಾದ್ಯಂತ ಕೋವಿಡ್ ಪ್ರಕೋಪದತ್ತ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಸಂಪರ್ಕದ ಮೂಲಕ ಹಾಗೂ ಮೂಲಗಳು ಸ್ಪಷ್ಟವಲ್ಲದ ಸೋಂಕು ಬಾಧೆ ಹೆಚ್ಚಿರುವುದು ಗಂಭೀರತೆಯ ಸೂಚನೆ ನೀಡಿದೆ.

              ರಾಜ್ಯದಲ್ಲಿ ಇಂದು 2476 ಜನರಿಗೆ ಕೋವಿಡ್ -19 ಸೋಂಕು ಖಚಿತವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. 

                  ಕೋವಿಡ್ ಪಾಸಿಟಿವ್ ಆದ ಜಿಲ್ಲಾವಾರು ವಿವರ: 

          ತಿರುವನಂತಪುರ 461 , ಮಲಪ್ಪುರಂ 352 , ಕೋಝಿಕ್ಕೋಡ್ 215 , ತ್ರಿಶೂರ್ 204 , ಆಲಪ್ಪುಳ 193, ಎರ್ನಾಕುಳಂ  193 , ಪತ್ತನಂತಿಟ್ಟು 180 , ಕೊಟ್ಟಾಯಂ 137, ಕೊಲ್ಲಂ 133 , ಕಣ್ಣೂರು 128, ಕಾಸರಗೋಡು ಜಿಲ್ಲೆಯ 101, ಪಾಲಕ್ಕಾಡ್ 86, ಇಡುಕ್ಕಿ 63 ಮತ್ತು ವಯನಾಡ್ ಜಿಲ್ಲೆಯ 30 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.

                  ಗುಣಮುಖರಾದವರ ಆದವರ ವಿವರ:

    ಇಂದು ರಾಜ್ಯದಲ್ಲಿ 1351 ಜನರು ರೋಗಮುಕ್ತರಾದರು. ತಿರುವನಂತಪುರ 201 , ಕೊಲ್ಲಂ  58 , ಪತ್ತನಂತಿಟ್ಟು 43 , ಆಲಪ್ಪುಳ  95 , ಕೊಟ್ಟಾಯಂ 59, ಇಡುಕಿ  13 , ಎರ್ನಾಕುಳಂ 191,  ತ್ರಿಶೂರ್ 100, ಪಾಲಕ್ಕಾಡ್ 100 , ಮಲಪ್ಪುರಂ 66 , ಕೋಝಿಕ್ಕೋಡ್  254 , ಕೊಲ್ಲಂ 150 , ವಯನಾಡ್ 32 , ಕಣ್ಣೂರು 49 ಮತ್ತು ಕಾಸರಗೋಡು ಜಿಲ್ಲೆಯ 40 ಮಂದಿ ಗುಣಮುಖರಾಗಿರುವರು. 

            13 ಮಂದಿ ಮೃತ್ಯು: 

    ರಾಜ್ಯದಲ್ಲಿ ಕೋವಿಡ್ ಬಾಧಿಸಿ ಇಂದು  13 ಸಾವುಗಳನ್ನು ಸರ್ಕಾರ ಖಚಿತಪಡಿಸಿದೆ. ತಿರುವನಂತಪುರಂನ ಪಾಲೋಡೆ ಮೂಲದ ತಂಕಪ್ಪನ್ ಚೆತ್ತ್ಯಾರ್ (80) ಮತ್ತು ಕಣ್ಣೂರು ಮೂಲದ ಪಿ.ಪಿ ಆಗಸ್ಟ್ 22 ರಂದು ನಿಧನರಾದರು. ಪಾರಶಾಲಾದ ಇಬ್ರಾಹಿಂ (63), ತಿರುವನಂತಪುರಂನ ಚೆಲ್ಲಯ್ಯನ್ (85), ಚಿರೈಂಕೀಯ  ಅಬ್ದುಲ್ ಗಫೂರ್ (83), ತಿರುವನಂತಪುರಂ, ಕಾರೈಕ್ಕಮಂಡಪಂನಿಂದ ಅಬ್ದುಲ್ ರಶೀದ್ (50), ತಿರುವನಂತಪುರಂ ಮತ್ತು ದೇವಸದನನ್ (74),  ಜುಲೈ 30 ರಂದು ನಿಧನರಾದ ಪೂವಾರ್ ಮೂಲದ ತಿರುವನಂತಪುರಂ ಮೇರಿ (72) ಮೃತರಾದರು. ಅಜಾನೂರ್ ಅಬ್ದುಲ್ಲ(62), ಮಂಗಲಂ ಮೂಲದ ಯೂಸುಫ್ ಮಾಸ್ಟರ್, ಪುಣೂರು, ಕಾಂತಪುರಂ ಮೃತರಾಗಿರುವುದಾಗಿ ಹೇಳಲಾಗಿದೆ. ಒಟ್ಟು ಸಾವಿನ ಸಂಖ್ಯೆ 257 ಕ್ಕೆ ಏರಿಕೆಯಾಗಿದೆ. 

            ರಾಜಧಾನಿಯಲ್ಲಿ ತೀವ್ರ ಕಳವಳ:

    ತಿರುವನಂತಪುರಂ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ರಾಜಧಾನಿಯಲ್ಲಿ ಹೆಚ್ಚು ಬೆಳೆಯುತ್ತಿದೆ. ಕರಾವಳಿ ಪ್ರದೇಶಗಳಲ್ಲಿ  ಪ್ರಬಲವಾಗಿವೆ. ಅನೇಕ ರೋಗಿಗಳ ಸೋಂಕಿನ ಮೂಲವು ಸ್ಪಷ್ಟವಾಗಿಲ್ಲ. ರಾಜಧಾನಿಯಲ್ಲಿ ನಿರಂತರ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ರೋಗ ಹರಡಲು ಕಾರಣವಾಗುತ್ತವೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜ ಈ ಬಗ್ಗೆ ಗಮನಸೆಳೆದಿರುವರು.


              


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries