ತಿರುವನಂತಪುರ: ತೀವ್ರಗತಿಯಲ್ಲಿ ಕೋವಿಡ್ ಸೋಂಕು ರಾಜ್ಯಾದ್ಯಂತ ಹೆಚ್ಚಳಗೊಳ್ಳುತ್ತಿದ್ದು ಓಣಂ ಹಬ್ಬಾಚರಣೆ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ನಿರ್ಬಂಧ ಸಡಿಲಿಕೆ ಅಗತ್ಯ ಇರಲಿಲ್ಲವೋ ಎಂಬಂತೆ ತೋರುತ್ತಿದೆ.
ಕೇರಳದಲ್ಲಿ ಇಂದು 2543 ಜನರಿಗೆ ಕೋವಿಡ್ -19 ದೃಢಪಟ್ಟಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಇಂದಿನ ಕೋವಿಡ್ ಮಾಹಿತಿ ವಿವರಿಸಲ್ಪಟ್ಟಿದೆ. 2097 ಬಾಧಿತರು ಗುಣಮುಖರಾಗಿದ್ದಾರೆ. ಸಂಪರ್ಕ-ಸೋಂಕಿತ ಕೋವಿಡ್ ಪ್ರಕರಣಗಳ ಸಂಖ್ಯೆ 2260 ಕ್ಕೆ ಇಳಿದಿದೆ. ಇಂದು, ಸರ್ಕಾರವು 7 ಕೋವಿಡ್ ಸಾವುಗಳನ್ನು ದೃಢಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಈವರೆಗಿನ ಕೋವಿಡ್ ಸಾವಿನ ಸಂಖ್ಯೆ ಒಟ್ಟು 274 ಕ್ಕೆ ತಲುಪಿದೆ. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಹಾಟ್ಸ್ಪಾಟ್ಗಳ ಸಂಖ್ಯೆಯೂ ಬದಲಾಗಿದೆ. ರಾಜ್ಯಾದ್ಯಂತ 599 ಹಾಟ್ಸ್ಪಾಟ್ಗಳಿವೆ.
ಕೋವಿಡ್ ಧನಾತ್ಮಕ ಪ್ರಕರಣಗಳ ಜಿಲ್ಲಾವಾರು ವಿವರ:
ಕೇರಳದಲ್ಲಿ ಇಂದು 2543 ಪಾಸಿಟಿವ್ ಬಾಧಿತರನ್ನು ಗುರುತಿಸಲಾಗಿದೆ. ತಿರುವನಂತಪುರ 532 , ಮಲಪ್ಪುರಂ 298 , ಆಲಪ್ಪುಳ 286 , ಎರ್ನಾಕುಳಂ 207 , ತ್ರಿಶೂರ್ 189 , ಕೋಝಿಕ್ಕೋಡ್ 174 , ಕಾಸರಗೋಡು 157, ಕೊಲ್ಲಂ 156,ಕಣ್ಣೂರು 135 , ಪಾಲಕ್ಕಾಡ್ 127 , ಕೊಟ್ಟಾಯಂ 126 , ಪತ್ತನಂತಿಟ್ಟು 88 , ಇಡುಕ್ಕಿ 49 ಮತ್ತು ವಯನಾಡ್ ಜಿಲ್ಲೆಯ 19 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.
ನೆಗೆಟಿವ್ ಆದವರ ವಿವರಗಳು:
ಹೆಚ್ಚುತ್ತಿರುವ ಕೋವಿಡ್ ವ್ಯಾಪಕತೆಯ ಮಧ್ಯೆ, ಇಂದು ರಾಜ್ಯದಲ್ಲಿ 2,097 ಜನರ ಪರೀಕ್ಷಾ ಫಲಿತಾಂಶಗಳು ಋಣಾತ್ಮಕವಾಗಿವೆ. ತಿರುವನಂತಪುರ ಜಿಲ್ಲೆಯ 544 ಜನರು, ಕೊಲ್ಲಂ ಜಿಲ್ಲೆಯ 93 ಜನರು, ಪತ್ತನಂತಿಟ್ಟು ಜಿಲ್ಲೆಯ 49 ಜನರು, ಆಲಪ್ಪುಳ ಜಿಲ್ಲೆಯ 150 ಜನರು, ಕೊಟ್ಟಾಯಂ ಜಿಲ್ಲೆಯ 82 ಜನರು, ಇಡುಕಿ ಜಿಲ್ಲೆಯ 36 , ಎರ್ನಾಕುಳಂ ಜಿಲ್ಲೆಯ 155 , ತ್ರಿಶೂರ್ ಜಿಲ್ಲೆ 110, ಪಾಲಕ್ಕಾಡ್ ಜಿಲ್ಲೆಯ 93, ಮಲಪ್ಪುರಂ ಜಿಲ್ಲೆಯ 345, ಕೋಝಿಕ್ಕೋಡ್ ಜಿಲ್ಲೆಯಿಂದ 106 ವಯನಾಡು ಜಿಲ್ಲೆಯ 7 , ಕಣ್ಣೂರು ಜಿಲ್ಲೆಯ 134 ಮತ್ತು ಕಾಸರಗೋಡು ಜಿಲ್ಲೆಯ 193 ಮಂದಿಗಳ ಫಲಿತಾಂಶ ಇಂದು ನೆಗೆಟಿವ್ ಆಗಿದೆ.
7 ಕೋವಿಡ್ ಸಾವುಗಳು:
ರಾಜ್ಯದಲ್ಲಿ ಇಂದು ಒಟ್ಟು ಏಳು ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ತಿರುವನಂತಪುರಂನ ಬಲರಾಮಪುರಂನ ಮೊಹಮ್ಮದ್ ಫಾತಿಮಾ (70), ಕರುಮಂನಿಂದ ಮದಸ್ವಾಮಿ ಚೆಟ್ಟ್ಯಾರ್ (80), ತಿರುವನಂತಪುರಂ, ಮಲಪ್ಪುರಂನ ಕಡನ್ನಣ್ಣ ಮೂಲದ ಮಾಧವಿ (77); ತಿರುವನಂತಪುರಂನ ಬಲರಾಮಪುರಂ ನಿವಾಸಿ ಕೃಷ್ಣಂಕುಟ್ಟಿ (69) ಆಗಸ್ಟ್ 22 ರಂದು ನಿಧನರಾದರು. ಕಣ್ಣೂರಿನ ಮಾಯಿಲ್ ನಿವಾಸಿ ಪಿ.ವಿ.ಯೂಸುಫ್(54) ಆಗಸ್ಟ್ 13 ರಂದು ನಿಧನರಾದರು. ಇದು ಒಟ್ಟು ಸಾವಿನ ಸಂಖ್ಯೆಯನ್ನು 274 ಕ್ಕೆ ಏರಿಸಿದೆ. ಆಲಪ್ಪುಳದಲ್ಲಿ ಎಲ್ಎವಿ ಪರೀಕ್ಷೆಯ ನಂತರ ಹೆಚ್ಚಿನ ಸಾವುಗಳು ಖಚಿತವಾಗುತ್ತಿವೆ.
52 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್!!:
ಇಂದು, 52 ಆರೋಗ್ಯ ಕಾರ್ಯಕರ್ತರಲ್ಲೂ ಕೋವಿಡ್ ದೃಢಪಟ್ಟಿದೆ. ತಿರುವನಂತಪುರಂ ಜಿಲ್ಲೆಯ 22 ಆರೋಗ್ಯ ಕಾರ್ಯಕರ್ತರು, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ 6, ಎರ್ನಾಕುಳಂ ಜಿಲ್ಲೆಯಲ್ಲಿ ತಲಾ 5, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ 4, ಆಲಪ್ಪುಳ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ತಲಾ 2 ಮತ್ತು ಕಾಸರಗೋಡು ಜಿಲ್ಲೆಯಲ್ಲಿ 1 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಓಣಂ ಹಬ್ಬಾಚರಣೆಯ ಮಧ್ಯೆ ಏರುಗತಿ!:
ಓಣಂ ಹಬ್ಬಾಚರಣೆಗೆ ಸರ್ಕಾರ ಕಾನೂನು ಸಡಿಲಿಕೆಗೆ ಆದೇಶ ನೀಡಿರುವ ಬೆನ್ನಿಗೇ ರಾಜ್ಯಾದ್ಯಂತ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಿಬರ್ಂಧಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ಸರ್ಕಾರ ಈಗ್ಯಾಕೆ ಸಡಿಲಿಕೆ ಮಾಡುತ್ತಿದೆ ಎಂಬ ಪ್ರಶ್ನೆ ಕೇಳಿಬಂದಿದೆ. ಸಂಪರ್ಕದ ಮೂಲಕ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ರೋಗದ ಪ್ರಮಾಣ ಹೆಚ್ಚಿರುವ ತಿರುವನಂತಪುರಂ ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚುತ್ತಿದೆ. ರಸ್ತೆಗಳಲ್ಲಿ ಜನಸಂದಣಿ ಹೆಚ್ಚು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇದೇ ರೀತಿ ಇದ್ದಲ್ಲಿ ಸೋಂಕಿನ ಗತಿ ಬೆಚ್ಚಿಬೀಳಿಸಲಿದೆ ಎಂದು ಊಹಿಸಲಾಗಿದೆ.


