HEALTH TIPS

ಕೋವಿಡ್ ಮಾನದಂಡಗಳನ್ನು ಕಠಿಣಗೊಳಿಸಲು ಐಜಿ ಕರೆ-ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಅಂಗಡಿಗಳನ್ನು ತೆರೆಯಬಹುದು

    

    ತಿರುವನಂತಪುರ: ರಾಜ್ಯದಲ್ಲಿ ಓಣಂ ದಟ್ಟಣೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಪೆÇಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

     ಎಲ್ಲಾ ಕೋವಿಡ್ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಅಂಗಡಿಗಳು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತವೆ. ಅಂಗಡಿಯ ಗಾತ್ರಕ್ಕೆ ಅನುಗುಣವಾಗಿ ಗ್ರಾಹಕರನ್ನು ಒಳಗೆ ಅನುಮತಿಸಬೇಕು. ಅಂಗಡಿಗೆ ಪ್ರವೇಶಿಸಬಹುದಾದ ಜನರ ಸಂಖ್ಯೆಯ ಮಾಹಿತಿಯನ್ನು ಅಂಗಡಿಯ ಹೊರಗೆ ಪ್ರದರ್ಶಿಸಬೇಕು.

     ಗ್ರಾಹಕರು ಕಾಯಲು ವೃತ್ತವನ್ನು ನಿರ್ಮಿಸಬೇಕು  ಅಥವಾ ಅಂಗಡಿಯ ಹೊರಗೆ ರೇಖೆಯನ್ನು ಗುರುತಿಸಬೇಕು. ಅಂಗಡಿಗಳು ಎಲ್ಲಾ ಸಾಮಾಜಿಕ ಭದ್ರತಾ ಮಾನದಂಡಗಳನ್ನು ಪೂರೈಸಬೇಕು. ಪೆÇಲೀಸರು ಇದನ್ನು ಖಚಿತಪಡಿಸುತ್ತಾರೆ.

     ಮಾಲ್‍ಗಳು ಮತ್ತು ಹೈಪರ್‍ಮಾರ್ಕೆಟ್‍ಗಳನ್ನು ತೆರೆಯಲು ಅನುಮತಿಸಲಾಗಿದ್ದರೂ, ಅವು ಮನೆ-ಮನೆಗಳಿಗೆ ವಿತರಣೆಯನ್ನು ಕೈಗೊಳ್ಳುವ ಕ್ರಮ ಸೂಕ್ತ.

    ಸಾರ್ವಜನಿಕ ಸ್ಥಳಗಳಲ್ಲಿ ಓಣಂ ಆಚರಣೆಯನ್ನು ಅನುಮತಿಸಲಾಗುವುದಿಲ್ಲ. ಓಣಂ ಔತಣ(ಸದ್ಯಂ) ಹೆಸರಿನಲ್ಲಿ ಯಾವುದೇ ಕೂಟಗಳು ಅಥವಾ ಸಾರ್ವಜನಿಕ ಕಾರ್ಯಗಳನ್ನು ಅನುಮತಿಸಲಾಗುವುದಿಲ್ಲ. ಮೀನುಗಳನ್ನು ಮಾರಾಟ ಮಾಡುವ ಸಂಸ್ಥೆಗಳು ಆರೋಗ್ಯ ಸುರಕ್ಷತಾ ನಿಬಂಧನೆಗಳಿಗೆ ಬದ್ಧವಾಗಿರಬೇಕು. ಓಣಂ ಸಮಯದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಕಂಟೇನ್ಮೆಂಟ್ ಪ್ರದೇಶದಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗುವುದು ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ಹೇಳಿರುವರು.

  ಆದರೆ..........

   ಲೋಕನಾಥ್ ಬೆಹ್ರಾ ಅವರ ನಿರ್ದೇಶನಗಳನ್ನು ಮುಖ್ಯಮಂತ್ರಿ ತಳ್ಳಿರುವರೆಂಬ ವರ್ತಮಾನ ಇದೀಗ ಕೇಳಿಬಂದಿದೆ. ಬೆಹ್ರಾ ಅವರು ಸರ್ಕಾರದೊಂದಿಗೆ ಚರ್ಚಿಸದೆ ನಿರ್ಧಾರ ಪ್ರಕಟಿಸಿರುವರು. ಅವರ ನಿರ್ದೇಶನಗಳನ್ನು ಪರಿಶೀಲಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿರುವರು.


     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries