ಬೇರಿಕೆ ಎಂಬಲ್ಲಿ ಯುವಕನೋರ್ವ ಇರಿತಕ್ಕೊಳಗಾಗಿ ಮ್ರತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಬೇರಿಕೆಯ ಚಂದ್ರ ನಾಯ್ಕ -ಪುಷ್ಪ ದಂಪತಿಗಳ ಪುತ್ರ ಕ್ರಪೇಶ್(28) ಇರಿತದಿಂದ ಮ್ರತನಾದ ಯುವಕ. ಹಲವಾರು ಕುಕ್ರತ್ಯಗಳ ಆರೋಪಿಯಾದ ಈತ ನಿನ್ನೆ ಪರಿಸರದ ಎರಡು ಮನೆಗಳಿಗೆ ತೆರಳಿ ದಾಂಧಲೆಗ್ಯೆದು ಇರಿದಿದ್ದನೆಂದು ತಿಳಿದುಬಂದಿದೆ. ಸದಾ ಗಾಂಜಾದ ಅಮಲಿನಲ್ಲಿರುತ್ತಿದ್ದ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆಯೆಂದು ಸ್ಥಳೀಯರು ತಿಳಿಸಿದ್ದಾರೆ.
ಕ್ರಪೇಶ್ ನಿನ್ನೆ ಬೇರಿಕೆಯ ದಿನೇಶ್ ಎಂಬವರ ಮೇಲೆ ಕ್ಷುಲ್ಲಕ ವಿಷಯಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಕ್ಯೆ,ತಲೆ,ಕಾಲುಗಳಿಗೆ ಗಂಭೀರ ಗಾಯಗೊಂಡ ದಿನೇಶ್ ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಜಿತೇಶ್ ಎಂಬವರಿಗೂ ನಿನ್ನೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.

