ತಿರುವನಂತಪುರ: ಕೋವಿಡ್ ಸಂದರ್ಭದ ಪ್ರತಿಕೂಲ ಸಂದರ್ಭವಾಗಿದ್ದರೂ ಓಣಂ ಆಚರಿಸುತ್ತಿರುವ ರಾಜ್ಯದ ಜನತೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಅಭಿನಂದಿಸಿ ಶುಭಹಾರೈಸಿ ಮಾತನಾಡಿದರು. ಮುಖ್ಯಮಂತ್ರಿಗಳ ಭಾಷಣದ ಪೂರ್ಣ ಪಾಠ ಇಂತಿದೆ.
ಈ ಬಾರಿ ತಿರುಓಣಂ ಲೋಕ ವ್ಯಾಪಕವಾದ ಕೋವಿಡ್ ಸಂಘರ್ಷದ ಮಧ್ಯೆ ನಮ್ಮ ಮುಂದಿದೆ. ಆದ್ದರಿಂದ ಈ ಬಾರಿಯ ಓಣಂ ಆಚರಣೆಯಲ್ಲಿ ನಾವು ಅಸಾಮಾನ್ಯವಾದ ಕತ್ತಲೆಯ ವಾತಾವರಣದಿಂದ ಹೊಸ ಭರವಸೆಯ ಭವಿಷ್ಯದತ್ತ ದಾಟಲು ಸಾಧ್ಯವಾಗುತ್ತದೆ ಎಂಬ ಆಕಾಂಕ್ಷೆಯೊಂದಿಗೆ ಹಬ್ಬಾಚರಣೆ ನಡೆಸಬೇಕು.
ನಾವು ಕರ್ಕಟಕ ಮಾಸದ ಐದು ದಿನಗಳನ್ನು ಕಳೆದ ಬಳಿಕ ತಿರುವೊಣಂ ಕಾಲದಲ್ಲಿದ್ದೇವೆ. ಆದ್ದರಿಂದ ಓಣಂ ಒಂದು ದೊಡ್ಡ ಭರವಸೆಯಾಗಿ ನಮ್ಮ ಮುಂದಿದೆ. ಯಾವುದೇ ಪ್ರತಿಕೂಲ ಸಂದರ್ಭಗಳನ್ನು ಮೀರಿ ಅನುಕೂಲಕರ ಮತ್ತು ಪ್ರಕಾಶಮಾನವಾದ ಸಮಯವಿರುತ್ತದೆ ಎಂಬುದು ನನ್ನ ಆಶಯ. ಆ ಭರವಸೆಯ ಬೆಳಕು ಮನಸ್ಸಿನಲ್ಲಿ ಬೆಳಗಲಿ. ಈ ಬಾರಿಯ ಓಣಂ ನಿಜಾರ್ಥದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.
ಓಣಂ ಒಂದು ಪರಿಕಲ್ಪನೆಯಾಗಿದ್ದು ಅದು ಭವಿಷ್ಯವನ್ನು ಇನ್ನಷ್ಟು ಪ್ರಸ್ತುತಪಡಿಸುತ್ತದೆ. ಈ ಪರಿಕಲ್ಪನೆಯು ಹಿಂದೆ ಎಲ್ಲಾ ಮಾನವರು ಒಂದೇ ಆಗಿದ್ದ ಕಾಲವೊಂದಿತ್ತು ಎಂದು ಹೇಳುತ್ತದೆ. ಆದ್ದರಿಂದ, ಆ ಪರಿಕಲ್ಪನೆಯು ಶಾಶ್ವತ ಶಕ್ತಿಯ ಕೇಂದ್ರವಾಗಿದೆ. ಆ ಪರಿಕಲ್ಪನೆಯು ಎಲ್ಲಾ ಮಾನವರಲ್ಲೂ ಏಕತೆ, ಸಮಾನತೆ, ಪ್ರೀತಿ ಮತ್ತು ಸಮೃದ್ಧಿಯಲ್ಲಿ ಬದುಕಬಲ್ಲ ಸಮಯಕ್ಕೆ ಶ್ರಮಿಸುವವರಿಗೆ ಸ್ಫೂರ್ತಿ ನೀಡುತ್ತದೆ. ಆ ಪ್ರಯತ್ನಗಳು ಯಶಸ್ವಿಯಾಗಲಿ.
ಎಲ್ಲಾ ಭಿನ್ನಾಭಿಪ್ರಾಯಗಳು ಮತ್ತು ಪೂರ್ವಾಗ್ರಹಗಳನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಂತೋಷದಿಂದ ಬದುಕಬಲ್ಲ ಉತ್ತಮ ಯುಗದ ಜನನಕ್ಕೆ ಓಣಂ ಯಾವಾಗಲೂ ಪ್ರೇರಣೆಯಾಗಲಿ. ಕೋವಿಡ್ ಪರಿಸ್ಥಿತಿಗಳನ್ನು ಅನುಸರಿಸಿ ಓಣಂ ಅನ್ನು ಮಿತಿಯೊಳಗೆ ಆಚರಿಸೋಣ. ಎಲ್ಲಾ ಮಲಯಾಳಿಗಳಿಗೆ ಹೃತ್ಪೂರ್ವಕ ಓಣಂ ಶುಭಾಶಯಗಳು ಎಂದು ಸಿಎಂ ಹೇಳಿದರು.