HEALTH TIPS

ನೀಲೇಶ್ವರ-ಎಡತ್ತೋಡು ರಸ್ತೆ ನಿರ್ಮಾಣ: ಜಾಗ ವಹಿಸುವಿಕೆ ತ್ವರಿತಗೊಳಿಸಲು ತೀರ್ಮಾನ

     ಕಾಸರಗೋಡು: ನೀಲೇಶ್ವರ-ಎಡತ್ತೋಡು ರಸ್ತೆ ನಿರ್ಮಾಣ: ಜಾಗ ವಹಿಸುವಿಕೆ ಪ್ರಕ್ರಿಯೆ ತ್ವರಿತಗೊಳಿಸಲು ತೀರ್ಮಾನಿಸಲಾಗಿದೆ.

           ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಈ ಸಂಬಂಧ ನಡೆದ ಅವಲೋಕನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಆದೇಶದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. 

       ರಸ್ತೆ ಅಭಿವೃದ್ಧಿ ಅಂಗವಾಗಿ ನೀಲೇಶ್ವರ ನಗರಸಭೆಯ ಪೇರೋಲ್ ಗ್ರಾಮದ ರೈಲ್ವೇ ಮೇಲ್ಸೇತುವೆಯ ಪೂರ್ವ ದಿಕ್ಕಿನಿಂದ ತಾಲೂಕು ಆಸ್ಪತ್ರೆ ವರೆಗೆ 1.3 ಕಿ.ಮೀ. ಅಗಲ ಹೆಚ್ಚಿಸುವ ನಿಟ್ಟಿನಲ್ಲಿ ಜಾಗ ವಹಿಸಿಕೊಳ್ಳುವ ಪ್ರಕ್ರಿಯೆ ತ್ವರಿತಗೊಳಿಸಲಾಗುವುದು. ಎಡತ್ತೋಡಿನಿಂದ ನೀಲೇಶ್ವರ ತಾಲೂಕು ಆಸ್ಪತ್ರೆ ವರೆಗಿನ ಜಾಗದಲ್ಲಿ ಅಗಲಗೊಳಿಸುವಿಕೆ ಮತ್ತು ಪಾಶ್ರ್ವ ಭಿತ್ತಿ ನಿರ್ಮಾಣ  ಇತ್ಯಾದಿ ಚಟುವಟಿಕೆ ನಡೆದುಬರುತ್ತಿದೆ. ಕಾಞಂಗಾಡ್ , ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ನಡುವೆ ಸಂಪರ್ಕ ಒದಗಿಸುವ 18 ಕಿಮೀ ರಸ್ತೆಯಲ್ಲಿ 12 ಕಿಮೀ ಗಳ ಅಭಿವೃದ್ಧಿ ಯೋಜನೆಯನ್ನು ಕಿಫ್ ಬಿಯಲ್ಲಿ ಅಳವಡಿಸಿ 42 ಕೋಟಿ ರೂ. ಮಂಜೂರು ಮಾಡಲಾಗಿದೆ. 18 ಕಿಮೀ ನಲ್ಲಿ 6 ಕಿಮೀ ರಸ್ತೆಯನ್ನು ಈ ಹಿಂದೆಯೇ ಅಭಿವೃದ್ಧಿಗೊಳಿಸಲಾಗಿದೆ. ಉಳಿದ 12 ಕಿಮೀ ರಸ್ತೆ ಅಭಿವೃದ್ಧಿ ಈಗ ನಡೆಯುತ್ತಿದೆ. ಪೇರೋಲ್ ಗ್ರಾಮದ ಜಾಗ ವಹಿಸಿಕೊಳ್ಳುವಿಕೆಗಾಗಿ ಮಾತ್ರ ಯೋಜನೆಯಲ್ಲಿ 10.8 ಕೋಟಿ ರೂ. ಮೀಸಲಿರಿಸಲಾಗಿದೆ.

          ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಶಾಸಕ ಎಂ.ರಾಜಗೋಪಾಲನ್, ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಸಹಾಯಕ ಜಿಲ್ಲಾಧಿಕಾರಿ ಸಜಿ ಎಫ್. ಮೆಂಡನ್, ತಹಸೀಲ್ದಾರರಾದ ಪಿ.ನರೇಶ್ ಕುಮಾರ್, ಕುಂuಟಿಜeಜಿiಟಿeಜಕಣ್ಣನ್ ಪಿ., ಎನ್.ಮಣಿರಾಜ್, ಲೋಕೋಪಯೋಗಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ಕೆ.ಪಿ.ವಿನೋದ್ ಕುಮಾರ್, ವಿಶೇಷ ತಹಸೀಲ್ದಾರರಾದ ಹಾಷಿಕ್, ಚಂದ್ರಾವತಿ ಪಿ.ಕೆ., ಸರ್ವೇಯರ್ ಪಿ.ಪಿ.ಬಾಬು ಮೊದಲಾದವರು ಉಪಸ್ಥಿತರಿದ್ದರು.     ಕಾಸರಗೋಡು: ನೀಲೇಶ್ವರ-ಎಡತ್ತೋಡು ರಸ್ತೆ ನಿರ್ಮಾಣ: ಜಾಗ ವಹಿಸುವಿಕೆ ಪ್ರಕ್ರಿಯೆ ತ್ವರಿತಗೊಳಿಸಲು ತೀರ್ಮಾನಿಸಲಾಗಿದೆ.

           ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಈ ಸಂಬಂಧ ನಡೆದ ಅವಲೋಕನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಆದೇಶದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. 

       ರಸ್ತೆ ಅಭಿವೃದ್ಧಿ ಅಂಗವಾಗಿ ನೀಲೇಶ್ವರ ನಗರಸಭೆಯ ಪೇರೋಲ್ ಗ್ರಾಮದ ರೈಲ್ವೇ ಮೇಲ್ಸೇತುವೆಯ ಪೂರ್ವ ದಿಕ್ಕಿನಿಂದ ತಾಲೂಕು ಆಸ್ಪತ್ರೆ ವರೆಗೆ 1.3 ಕಿ.ಮೀ. ಅಗಲ ಹೆಚ್ಚಿಸುವ ನಿಟ್ಟಿನಲ್ಲಿ ಜಾಗ ವಹಿಸಿಕೊಳ್ಳುವ ಪ್ರಕ್ರಿಯೆ ತ್ವರಿತಗೊಳಿಸಲಾಗುವುದು. ಎಡತ್ತೋಡಿನಿಂದ ನೀಲೇಶ್ವರ ತಾಲೂಕು ಆಸ್ಪತ್ರೆ ವರೆಗಿನ ಜಾಗದಲ್ಲಿ ಅಗಲಗೊಳಿಸುವಿಕೆ ಮತ್ತು ಪಾಶ್ರ್ವ ಭಿತ್ತಿ ನಿರ್ಮಾಣ  ಇತ್ಯಾದಿ ಚಟುವಟಿಕೆ ನಡೆದುಬರುತ್ತಿದೆ. ಕಾಞಂಗಾಡ್ , ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ ನಡುವೆ ಸಂಪರ್ಕ ಒದಗಿಸುವ 18 ಕಿಮೀ ರಸ್ತೆಯಲ್ಲಿ 12 ಕಿಮೀ ಗಳ ಅಭಿವೃದ್ಧಿ ಯೋಜನೆಯನ್ನು ಕಿಫ್ ಬಿಯಲ್ಲಿ ಅಳವಡಿಸಿ 42 ಕೋಟಿ ರೂ. ಮಂಜೂರು ಮಾಡಲಾಗಿದೆ. 18 ಕಿಮೀ ನಲ್ಲಿ 6 ಕಿಮೀ ರಸ್ತೆಯನ್ನು ಈ ಹಿಂದೆಯೇ ಅಭಿವೃದ್ಧಿಗೊಳಿಸಲಾಗಿದೆ. ಉಳಿದ 12 ಕಿಮೀ ರಸ್ತೆ ಅಭಿವೃದ್ಧಿ ಈಗ ನಡೆಯುತ್ತಿದೆ. ಪೇರೋಲ್ ಗ್ರಾಮದ ಜಾಗ ವಹಿಸಿಕೊಳ್ಳುವಿಕೆಗಾಗಿ ಮಾತ್ರ ಯೋಜನೆಯಲ್ಲಿ 10.8 ಕೋಟಿ ರೂ. ಮೀಸಲಿರಿಸಲಾಗಿದೆ.

          ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಶಾಸಕ ಎಂ.ರಾಜಗೋಪಾಲನ್, ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಸಹಾಯಕ ಜಿಲ್ಲಾಧಿಕಾರಿ ಸಜಿ ಎಫ್. ಮೆಂಡನ್, ತಹಸೀಲ್ದಾರರಾದ ಪಿ.ನರೇಶ್ ಕುಮಾರ್, ಕುಂuಟಿಜeಜಿiಟಿeಜಕಣ್ಣನ್ ಪಿ., ಎನ್.ಮಣಿರಾಜ್, ಲೋಕೋಪಯೋಗಿ ವಿಭಾಗ ಕಾರ್ಯಕಾರಿ ಇಂಜಿನಿಯರ್ ಕೆ.ಪಿ.ವಿನೋದ್ ಕುಮಾರ್, ವಿಶೇಷ ತಹಸೀಲ್ದಾರರಾದ ಹಾಷಿಕ್, ಚಂದ್ರಾವತಿ ಪಿ.ಕೆ., ಸರ್ವೇಯರ್ ಪಿ.ಪಿ.ಬಾಬು ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries