ಕಾಸರಗೋಡು: ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ನಡೆಸಲಾಗುವ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ಗಳ ಅಂಗವಾಗಿ ಮಂಜೇಶ್ವರ ತಾಲೂಕು ಮಟ್ಟದ ಅದಾಲತ್ ಅ.5ರಂದು ಜರುಗಲಿದೆ. ಈ ಸಂಬಂಧ ದೂರುಗಳಿದ್ದಲ್ಲಿ ಸಲ್ಲಿಸುವ ಕೊನೆಯ ದಿನ ಸೆ.28 ರಾತ್ರಿ 12 ಗಂಟೆ ವರೆಗೆ ಆಗಿದೆ.
ಕುಡಿಯುವ ನೀರು, ವಿದ್ಯುತ್, ಪಿಂಚಣಿ, ಸ್ಥಳೀಯಾಡಳಿತ ಸಂಸ್ಥೇಗಳು, ಆರೋಗ್ಯ ಇಲಾಖೆ ಗಳಿಗೆ ಸಂಬಂಧಿಸಿದ ದೂರುಗಳನ್ನು ಅದಾಲತ್ ಗೆ ಸಲ್ಲಿಸಬಹುದು. ಎನ್.ಆರ್.ಎಂ.ಕೇಸುಗಳು, ಲೈಫ್ ಮಿಷನ್ ಯೋಜನೆ, ಪಡಿತರ ಚೀಟಿ ಸಿ.ಎಂ.ಡಿ.ಆರ್.ಎಫ್ ಚಿಕಿತ್ಸಾ ಸಹಾಯ , ಸ್ಟಾಟಿಯೂಟರಿ ರೂಪದಲ್ಲಿ ಲಭಿಸಬೇಕಿರುವ ಪರಿಹಾರ, ಭೂಹಕ್ಕು ಅರ್ಜಿ ಇತ್ಯಾದಿ ದೂರುಗಳನ್ನು ಅದಾಲತ್ ನಲ್ಲಿ ಪರಿಸೀಲಿಸುವುದಿಲ್ಲ. www.edistrict.kerala.gov.in ಸೈಟ್ ಮೂಲಕ ಆನ್ ಲೈನ್ ಆಗಿ, ಅಕ್ಷಯ ಸೆಂಟರ್ ಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಜೊತೆಗೆ ಮಂಜೇಶ್ವರ ತಾಲೂಕು ಕಚೇರಿ, ಸಂಬಂಧಿಸಿದ ಗ್ರಾಮ ಕಚೇರಿಗಳಲ್ಲಿ ನೇರವಾಗಿ ದೂರು ಸಲ್ಲಿಸಬಹುದು. ಸಾರ್ವಜನಿಕರು ಆನ್ ಲೈನ್ ರೂಪದಲ್ಲಿ ಸಲ್ಲಿಸುವ ಎಲ್ಲ ದೂರುಗಳನ್ನೂ ಮಂಜೇಶ್ವರ ತಾಲೂಕು ಕಚೇರಿಗೂ ಸಲ್ಲಿಸಬೇಕು.





