ಮಧೂರು: ಕನ್ನಡ ಮತ್ತು ಮಲಯಾಳಂ ಬಲ್ಲ ಎಲ್.ಡಿ.ಕ್ಲರ್ಕ್ ಪರೀಕ್ಷಾ ಸಹಾಯಿ(ಗೈಡ್)ನ್ನು ಮಂಗಳವಾರ ಮಧೂರು ಶ್ರೀಮಹಾಗಣಪತಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪುಸ್ತಕದ ಸಂಪಾದಕ, ಕೇರಳ ಲೋಕಸೇವಾ ಆಯೋಗದ ನಿವೃತ್ತ ಅಮಡರ್ ಸೆಕ್ರಟರಿ ಪಿ. ಗಣೇಶ್ ಪ್ರಸಾದ್ ಪಾಣೂರು, ದೇವಸ್ಥಾನದ ಹಿರಿಯ ಅಧಿಕಾರಿ ಎಚ್.ಗೋಪಾಲಕೃಷ್ಣ ಭಟ್, ಬಿ.ಎನ್.ಸುಬ್ರಹ್ಮಣ್ಯ, ಶಾಮ ಮಧ್ಯಸ್ಥ, ಸೂರ್ಯಪ್ರಕಾಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





