HEALTH TIPS

ಕೋವಿಡ್-ಇಂದು ರಾಜ್ಯದಲ್ಲಿ 8764 ಜನರಿಗೆ ಸೋಂಕು-7,723 ಜನರು ಗುಣಮುಖ-ಕಾಸರಗೋಡಲ್ಲಿ 323 ಮಂದಿಗೆ ಸೋಂಕು ಪತ್ತೆ

   

       ತಿರುವನಂತಪುರ: ಇಂದು ರಾಜ್ಯದಲ್ಲಿ 8764 ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಇಂದು, ಕೋವಿಡ್ ಸೋಂಕಿನಿಂದ 21 ಜನರು ಸಾವನ್ನಪ್ಪಿದ್ದಾರೆ. 7723 ಜನರನ್ನು ಗುಣಪಡಿಸಲಾಗಿದೆ. 95,407 ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. ಕಳೆದ 24 ಗಂಟೆಗಳಲ್ಲಿ 48,253 ಮಾದರಿಗಳನ್ನು ಪರೀಕ್ಷಿಸಲಾಯಿತು. 7723 ಜನರನ್ನು ಗುಣಪಡಿಸಲಾಗಿದೆ. ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಮಾಹಿತಿ ನೀಡಿದರು. 

             ಜಿಲ್ಲಾವಾರು ಅಂಕಿಅಂಶಗಳು:

     ಕೇರಳದಲ್ಲಿ ಇಂದು 8,764 ಜನರಿಗೆ ಕೋವಿಡ್ ಖಚಿತವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಲಪ್ಪುರಂ 1,139, ಎರ್ನಾಕುಳಂ 1,122, ಕೋಝಿಕ್ಕೋಡ್ 1,113, ತ್ರಿಶೂರ್ 1,010, ಕೊಲ್ಲಂ 907, ತಿರುವನಂತಪುರ 777, ಪಾಲಕ್ಕಾಡ್ 606, ಆಲಪ್ಪುಳ 488, ಕೊಟ್ಟಾಯಂ 476, ಕಣ್ಣೂರು 370, ಕಾಸರಗೋಡು 323, ಪತ್ತನಂತಿಟ್ಟು 244, ವಯನಾಡು 110, ಇಡುಕ್ಕಿ 79 ಎಂಬಂತೆ ಸೋಂಕು ಪತ್ತೆಯಾಗಿದೆ. 

         ಗುಣಮುಖರಾದವರ ವಿವರ: 

   ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7723 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 815, ಕೊಲ್ಲಂ 410, ಪತ್ತನಂತಿಟ್ಟು 203, ಆಲಪ್ಪುಳ 534, ಕೊಟ್ಟಾಯಂ 480, ಇಡುಕ್ಕಿ 129, ಎರ್ನಾಕುಳಂ 1123, ತ್ರಿಶೂರ್ 650, ಪಾಲಕ್ಕಾಡ್ 385, ಮಲಪ್ಪುರಂ 772, ಕೋಝಿಕ್ಕೋಡ್ 1236, ವಯನಾಡ್ 122,ಕಣ್ಣೂರು 442, ಕಾಸರಗೋಡು 422   ಎಂಬಂತೆ ಪರೀಕ್ಷೆಗಳು ನೆಗೆಟಿವ್ ಆಗಿದೆ. ಇದರೊಂದಿಗೆ, 95,407 ಜನರಿಗೆ ಸೋಂಕು ಪತ್ತೆಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 2,07,357 ನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

           21 ಕೋವಿಡ್ ಸಾವುಗಳು:

    ಇಂದು, ಕೋವಿಡ್ ಬಾಧಿಸಿ 21 ಸಾವುಗಳು ದೃಢಪಡಿಸಲಾಗಿದೆ. ಆಲಪ್ಪುಳ ಒಟ್ಟಾಮಾಶ್ಚೇರಿಯ ಫ್ರಾನ್ಸಿಸ್ (68), ನೀರಕುನ್ನಂನ ಗೋಪಿ (76), ವಳ್ಳಿಕುನ್ನಿನ ಅಜಯಕುಮಾರ್ (51), ಕೋಮನಾದ ಪುರುಷನ್ (81), ಎರ್ನಾಕುಳಂ ಮುಳವ್ ಕ್ಕಾಡ್ ನ  ಮೇರಿ ಬಾಬು (69),  ಪುತ್ತುವಾಯ್ಪುದ ಸಿ.ಎಸ್. ಪುಷ್ಪರಾಜಿ (38), ತೊಟ್ಟಕಟ್ಟುಕಾರ ಟಿ.ಎ.ಮೊಹಮ್ಮದ್ ಅಶ್ರಫ್(68),  ತೆಟ್ಟುಕಡತ್ತರದ ಮೊಹಮ್ಮದ್ ಅಶ್ರಫ್ (68), ಉದಯಂಪೇರೂರ್ ನ ವಿಶ್ವಂಭರನ್(65), ಮಲಪ್ಪುರಂ ಮಂಜೆರಿಯ ಕೃಷ್ಣದಾಸ್ (67), ಕೊಟ್ಟೂರ್ ನ ತೈಯುಮ್ಮ (70), ವಲ್ಲಿಲಪುಳದ ಮುಹಮ್ಮದ್ (87), ಕೋಝಿಕ್ಕೋಡ್ ನ ನರಿಕುನ್ನಿಯ ಅಬ್ದುರಹ್ಮಾನ್ (68), ಬಾಲುಶ್ಚೇರಿಯ ಆರೂನ್ (70), ಪೆರುವಟ್ಟೂರಿನ ಬೀರಾನ್(47), ಕಣ್ಣಕ್ಕರದ ಚೆರಿಯಾಕ್ಕೋಸ್(73), ಮೆಪ್ಪಯೂರ್  ನ ಕುಂಞÂ ಅಬ್ದುಲ್ಲ(65), ವಡಗರದ ಸೈಯ್ಯದ್ ಅಬು ತಂಙಳ್(68), ಅವಿದನಲ್ಲೂರ್ ನ ಪ್ರಭಾಕರ್(67), ಪನ್ನಿಯಕ್ಕರದ ಮಮ್ಮುಕ್ಕೋಯ(82), ಕಣ್ಣೂರು ಎರಞಳಿಯ ಅಮರ್ ನಾಥ್(69), ಕಾಸರಗೋಡು ಚೆಂಗಳದ ಅನ್ದುಲ್ಲ(66) ಎಂಬವರು ಕೋವಿಡ್ ಬಾಧಿಸಿ ಇಂದು ಮೃತಪಟ್ಟವರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,046 ಕ್ಕೆ ಏರಿಕೆಯಾಗಿದೆ. 

          ಸಾರ್ವಜನಿಕರ ವರ್ತನೆ ನಿರಾಶಾದಾಯಕ:

    ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ವರ್ತನೆ ನಿರಾಶಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಕೆಲವು ಮೀನು ಮಾರುಕಟ್ಟೆಗಳು ಮತ್ತು ರಸ್ತೆಬದಿಯ ಸ್ಟಾಲ್‍ಗಳು ಮತ್ತು ಆಹಾರ ವಿತರಣಾ ಸಂಸ್ಥೆಗಳು ಸಾಮಾಜಿಕ ದೂರವನ್ನು ಒಳಗೊಂಡಂತೆ ಕೋವಿಡ್ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಜಾಗ್ರತೆಯ ಸೂಚನೆ ನೀಡಿದರು. 

         ವಿದೇಶದಿಂದ ಬಂದವರು:

   ಕೋವಿಡ್ ಬಳಿಕ ವಿದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ಮನೆಗೆ ಮರಳಿದವರು ರಸ್ತೆಗಳ ಬದಿಯಲ್ಲಿ ಅನೇಕ ಸಣ್ಣ ಚಿಲ್ಲರೆ ವ್ಯಾಪಾರಿಗಳಲ್ಲಿ ನಿರತರಾಗಿರುವರು. ರಸ್ತೆಬದಿಯಲ್ಲಿ ವ್ಯಾಪಾರ ಮಾಡುವ ಮೂಲಕ ಜೀವನ ಸಾಗಿಸುವವರಿಗೆ ಪ್ರೋತ್ಸಾವಾಗಿ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಅವರಿಗೆ ಸಹಾಯ ಮಾಡಬಹುದು. ಆದರೆ ಜನರು ಇಂತಹ ಕೇಂದ್ರಗಳಲ್ಲಿ ಒಟ್ಟು ಸೇರುವುದು ಸರಿಯಲ್ಲ ಮತ್ತು ಸರಿಯಾದ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು ಎಂದು ಸಿಎಂ ಹೇಳಿದರು.

           ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ ಲಭ್ಯ:


    ಕೋವಿಡ್ ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ ದೇಶದಲ್ಲಿ ಲಭ್ಯವಾಗಲಿದೆ ಎಂದು ಏಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದರು. ಲಸಿಕೆ ವಿತರಣೆಗೆ ತಜ್ಞರ ತಂಡ ಈಗಾಗಲೇ ಮಾನದಂಡಗಳು ಮತ್ತು ಯೋಜನೆಗಳನ್ನು ರೂಪಿಸಿದೆ ಮತ್ತು ಯಾರಿಗೆ ಲಸಿಕೆ ಮೊದಲು ಲಭ್ಯವಾಗಬೇಕು ಎಂಬುದನ್ನು ಈಗಾಗಲೇ ನಿರ್ಣಯಿಸಲಾಗಿದೆ ಎಂದು  ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಸಚಿವ ಸಂಪುಟ ಸಭೆಯಲ್ಲಿ ಸಚಿವರು ಮಾತನಾಡಿದರು. 

           ದೇಶಕ್ಕೆ ಸಮಾಧಾನ:

    ದೇಶದ ಒಟ್ಟು ಕೋವಿಡ್ ಅಂಕಿಅಂಶಗಳ ಸಂಖ್ಯೆಯನ್ನು ಪರಿಶೀಲಿಸಿದಾಗ, ಇಂದಿನ ದಿನ ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 24 ಗಂಟೆಗಳಲ್ಲಿ 55,341 ಪ್ರಕರಣಗಳು ವರದಿಯಾಗಿವೆ.

       ದೇಶದಲ್ಲಿ ಇದುವರೆಗೆ 71 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ 62,27,296 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 706 ಸಾವುಗಳು ವರದಿಯಾಗಿವೆ.


      


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries