ಕೊಚ್ಚಿ: ರಾಜತಾಂತ್ರಿಕ ಬ್ಯಾರಿಗೇಜ್ ಗಳ ಬಿಡುಗಡೆಯಲ್ಲಿ ತಾನು ಸ್ವತಃ ಹಸ್ತಕ್ಷೇಪ ನಡೆಸಿರುವ ಬಗ್ಗೆ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್ ಒಪ್ಪಿಕೊಂಡಿದ್ದಾರೆ ಎಂದು ಇಡಿಯ ಬಂಧನ ಜ್ಞಾಪಕದಲ್ಲಿ ತಿಳಿಸಲಾಗಿದೆ. ಚಿನ್ನ ಹೊಂದಿರುವ ರಾಜತಾಂತ್ರಿಕ ಚೀಲವನ್ನು ಬಿಟ್ಟುಕೊಡಲು ಎಂ.ಶಿವಶಂಕರ್ ಮಧ್ಯಪ್ರವೇಶಿಸಿದ್ದಾರೆ ಎಂದು ಬಂಧನ ಜ್ಞಾಪಕದಲ್ಲಿ ತಿಳಿಸಲಾಗಿದೆ. ಆದರೆ, ಇದು ಕಳ್ಳಸಾಗಣೆ ಮಾಡಿದ ವಸ್ತು ಎಂದು ತಿಳಿದೇ ಈ ಹಸ್ತಕ್ಷೇಪ ನಡೆಸಿದ್ದೇ ಎನ್ನುವುದು ಇನ್ನೂ ಖಚಿತಗೊಂಡಿಲ್ಲ.
ಹಿರಿಯ ಕಸ್ಟಮ್ಸ್ ಅಧಿಕಾರಿಯನ್ನು ಕರೆ ಮಾಡಿರುವುದಾಗಿ ಶಿವಶಂಕರ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಶಿವಶಂಕರ್ ಸ್ವಪ್ನಾ ಅವರ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸುತ್ತಿದ್ದರು ಮತ್ತು ಚಿನ್ನ ಕಳ್ಳಸಾಗಣೆಗೆ ಅನುಕೂಲ ಮಾಡಿಕೊಡುತ್ತಿದ್ದರು. ಐದು ಪುಟಗಳ ಬಂಧನ ಜ್ಞಾಪಕ ಪತ್ರದಲ್ಲಿ ಈ ಬಗ್ಗೆ ಹತ್ತೊಂಬತ್ತು ಅಂಶಗಳಿವೆ ಎಂದು ವರದಿಯಾಗಿದೆ.
ಸಿಎಂ ಕಚೇರಿಯ ಮುಖ್ಯಸ್ಥರಾಗಿದ್ದ ಶಿವಶಂಕರ್ ಅವರನ್ನು ಬುಧವಾರ ಇ.ಡಿ ಏಳು ಗಂಟೆಗಳ ವಿಚಾರಣೆಯ ನಡೆಸಿ ಅದರ ಬೆನ್ನಿಗೇ ಬಂಧಿಸಿದರು. ಚಿನ್ನಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರನ್ನು ಮನಿ ಲಾಂಡರಿಂಗ್ ವಿರೋಧಿ ಕಾಯ್ದೆಯಡಿ ಬಂಧಿಸಲಾಗಿದೆ.
ಬಂಧಿತ ಎಂ.ಶಿವಶಂಕರ್ ಅವರನ್ನು ಇಂದು ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಮುಂದೂಡಲ್ಪಟ್ಟ ಕಾರಣ ನ್ಯಾಯಾಧೀಶರು ವಿಶೇಷ ತನಿಖೆ ನಡೆಸಿದರೆಂದು ತಿಳಿದುಬಂದಿದೆ. ಕಸ್ಟಮ್ಸ್ ಮತ್ತು ಜಾರಿ ಪ್ರಕರಣಗಳಲ್ಲಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಎಂ.ಶಿವಶಂಕರ್ ಅವರನ್ನು ಕಸ್ಟಡಿಗೆಪಡೆದು ಬಂಧಿಸಿ ಪ್ರಶ್ನಿಸಲಾಯಿತು.