HEALTH TIPS

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ-ಮಾಜಿ ಮುಖ್ಯ ಕಾರ್ಯದರ್ಶಿ ಶಿವಶಂಕರ್ ವಿಚಾರಣೆ ಶೀಘ್ರ ಇಲ್ಲ-ಪುರಾವೆಗಳ ಕೊರತೆ-ದಾಖಲೆ ತಯಾರಿಸಲು ಸೂಚನೆ!

 

           ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಕಸ್ಟಮ್ಸ್ ಮಂಗಳವಾರ ಪ್ರಶ್ನಿಸಿಲ್ಲ. ಆದರೆ ಇಂದು(ಬುಧವಾರ) ಪಾಸ್‍ಪೋರ್ಟ್ ಮತ್ತು ವಿದೇಶಿ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಶಿವಶಂಕರ್ ಅವರನ್ನು ನೇರವಾಗಿ ಸಂಪರ್ಕಿಸಬಾರದು ಎಂದು ತನಿಖಾ ತಂಡ ತಿಳಿಸಿದೆ.

         ಎನ್ ಐ ಎ ನ್ಯಾಯಾಲಯ ಸೂಚಿಸಿದ ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ತನಿಖಾ ತಂಡವು ಶಿವಶಂಕರ್‍ಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ. ಶಿವಶಂಕರ್ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿ ಅದು ದೃಢಪಟ್ಟ ಬಳಿಕ ತನಿಖಾ ತಂಡ ತನಿಖೆಯನ್ನು ಮುಂದುವರಿಸಲಿದೆ. 

      ಶಿವಶಂಕರ್ ರೊಂದಿಗೆ ನಿಕಟತೆ ಇರುವ ಯಾರೂ ದಾಖಲೆಗಳನ್ನು ತಯಾರಿಸಬಹುದಾಗಿದ್ದು ಅವುಗಳನ್ನು ಕೊಚ್ಚಿಯ ಕಸ್ಟಮ್ಸ್ ಕಚೇರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಮಂಗಳವಾರ ಶಿವಶಂಕರ್ ಅವರನ್ನು ಪ್ರಶ್ನಿಸಲಾಗುವುದು ಎಂಬ ವರದಿಗಳು ಬಂದಿದ್ದವು. ಆದರೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಮಯ ತೆಗೆದುಕೊಳ್ಳುವುದರಿಂದ ಪ್ರಶ್ನಿಸುವುದು ವಿಳಂಬವಾಗಿದೆ.

      ಶಿವಶಂಕರ್ ಅವರನ್ನು ಶುಕ್ರವಾರ ಮತ್ತು ಶನಿವಾರ ತಲಾ 11 ಗಂಟೆಗಳಷ್ಟು ಕಾಲ ವಿಚಾರಣೆ ನಡೆಸಲಾಗಿತ್ತು. ಬಳಿಕ ಮಂಗಳವಾರ ಮತ್ತೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ ಅವರು ವಿಚಾರಣೆಗೆ ಹಾಜರಾಗಬೇಕಾಗಿಲ್ಲ ಎಂದು ಕಸ್ಟಮ್ಸ್ ತಿಳಿಸಿತು. ಶುಕ್ರವಾರ ಶಿವಶಂಕರ್ ಅವರನ್ನು ದುಬೈನಿಂದ ಖರ್ಜೂರದ ಹಣ್ಣುಗಳನ್ನು  ಆಮದು ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿ ಪ್ರಶ್ನಿಸಲಾಗಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಶನಿವಾರ ಪರಿಗಣಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries