ಕೊಚ್ಚಿ: ರಾಜ್ಯದಲ್ಲಿ ಉದ್ಯಮ ವಲಯವನ್ನು ಸ್ನೇಹಪರವಾಗಿಸಲು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಹೇಳಿದ್ದಾರೆ.
ಕೈಗಾರಿಕಾ ಹೂಡಿಕೆಯ ಕಾರ್ಯವಿಧಾನಗಳನ್ನು ಸರಳೀಕರಿಸಿ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಆನ್ಲೈನ್ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸುವುದರೊಂದಿಗೆ ರಾಜ್ಯವನ್ನು ಉದ್ಯಮಿಗಳ ಕನಸಿನ ಭೂಮಿಯಾಗಿ ಪರಿವರ್ತಿಸಲಾಗಿದೆ. ನಿಯಮ ಏಳು ಮತ್ತು 10 ನ್ನು ತಿದ್ದುಪಡಿ ಮಾಡುವ ಮೂಲಕ ಕೇರಳದಲ್ಲಿ ಹೂಡಿಕೆಗಳಿಗೆ ಉತ್ತೇಜನ ಮತ್ತು ಸೌಲಭ್ಯ ಕಾಯ್ದೆ 2018 ಅನ್ನು ಜಾರಿಗೆ ತರಲಾಗಿದೆ ಎಂದು ಅವರು ತಮ್ಮ ಫೇಸ್ಬುಕ್ ಪೆÇೀಸ್ಟ್ನಲ್ಲಿ ತಿಳಿಸಿದ್ದಾರೆ.
ಹೊಸ ನಿಯಮಗಳ ಪ್ರಕಾರ ಒಂದು ವಾರದೊಳಗೆ 100 ಕೋಟಿ ರೂ.ಗಳ ಹೂಡಿಕೆ ಹೊಂದಿರುವ ಕೈಗಾರಿಕಾ ಉದ್ಯಮಗಳಿಗೆ ಅವಕಾಶ ನೀಡಲಾಗುವುದು. ಹೂಡಿಕೆ ಪ್ರಾರಂಭಿಸಲು ಬಯಸುವವರಿಗೆ ಅವರು ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರೆ ಒಂದು ವಾರದೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನೀಡಲಾಗುತ್ತದೆ. ಕೆ-ಸ್ವಿಫ್ಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅನುಮೋದನೆ ಪಡೆದರೆ ಅರ್ಜಿ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣಕಾಸಿನ ನೆರವು ಪಡೆಯಲು ಅವುಗಳನ್ನು ಮಾನ್ಯತೆಯ ದಾಖಲೆಯಾಗಿಯೂ ಬಳಸಬಹುದು. ಅನುಮೋದನೆಯ ಒಂದು ವರ್ಷದೊಳಗೆ, ಹೂಡಿಕೆದಾರರು ನಿಯಮಗಳ ಅನುಸರಣೆಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
10 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಎಂಎಸ್ಎಂಇ ಉದ್ಯಮಗಳಿಗೆ ಯಾವುದೇ ಪೂರ್ವ ಅನುಮೋದನೆ ಅಗತ್ಯವಿಲ್ಲ. ಕೆ-ಸ್ವಿಫ್ಟ್ ಮೂಲಕವೇ ಪ್ರಮಾಣೀಕರಣವನ್ನು ಮಾಡಬಹುದು. ಮೂರು ವರ್ಷಗಳ ಬಳಿಕ ಇತರ ಹಂತಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿದೆ. ಉದ್ಯಮಶೀಲತಾ ಪರವಾನಗಿಗಳಿಗಾಗಿ ಅರ್ಜಿಗಳನ್ನು ಪರಿಗಣಿಸಲು ಐದು ಸದಸ್ಯರ ಸಮಿತಿಗೆ ನೆರವಾಗುವ ಹೂಡಿಕೆ ಸೌಲಭ್ಯ ಸೆಲ್ ಸ್ಥಾಪಿಸಲಾಗಿದೆ. ಎಂಎಸ್ಎಂಇ ಅಲ್ಲದ ಕೈಗಾರಿಕೆಗಳನ್ನು ಪ್ರಾರಂಭಿಸಲು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅರ್ಜಿಗಳನ್ನು ಪರಿಗಣಿಸಲು ಹೂಡಿಕೆ ಸೌಲಭ್ಯ ಬ್ಯೂರೋ ಎಂಬ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಪೆÇೀಸ್ಟ್ನಲ್ಲಿ ತಿಳಿಸಿದ್ದಾರೆ.





