HEALTH TIPS

ಕೇರಳದ ಬಿಬಿತಾ ವಾಳಚ್ಚಾಲ್ ಟಾಟಾ ಫೌಂಡೇಶನ್ 'ಸಂವಾದ್ ಫೆಲೋಶಿಪ್ 2020' ಗೆ ಆಯ್ಕೆ

               

       ತಿರುವನಂತಪುರ: ಟಾಟಾ ಫೌಂಡೇಶನ್ ನೀಡುವ 'ಸಂವಾದ್ ಫೆಲೋಶಿಪ್ 2020' ಪ್ರಶಸ್ತಿಗೆ ಅರ್ಹತೆ ಪಡೆದ ದೇಶದ ಆರು ಜನರಲ್ಲಿ ಒಬ್ಬರಾಗಿ ಬುಡಕಟ್ಟು ವಿಭಾಗದ  ಬಿಬಿತಾ ವಾಳಚ್ಚಾಲ್ ಆಯ್ಕೆಯಾಗಿದ್ದಾರೆ.

        ದೇಶದ ಬುಡಕಟ್ಟು ಪ್ರದೇಶಗಳಲ್ಲಿನ ಸಂಶೋಧನಾ ಯೋಜನೆಗಳಿಗೆ ನೀಡಲಾಗುವ ಫೆಲೋಶಿಪ್ ಸಂವಾದ್ ಆಗಿದ್ದು ಈ ವರ್ಷದ ಫೆಲೋಶಿಪ್‍ಗಾಗಿ ಪ್ರತಿಷ್ಠಾನವು ದೇಶದ ವಿವಿಧ ರಾಜ್ಯಗಳಿಂದ 124 ಅರ್ಜಿಗಳನ್ನು ಸ್ವೀಕರಿಸಿತ್ತು.

       ಈ ಪೈಕಿ ಅಂತಿಮವಾಗಿ ಆರು ಜನರನ್ನು ಫೆಲೋಶಿಪ್‍ಗೆ ಆಯ್ಕೆ ಮಾಡಲಾಗಿದೆ. ಫೆಲೋಶಿಪ್ ಪಡೆಯಲು ಅರ್ಹರಾಗಿರುವ ಕೇರಳದ ಏಕೈಕ ವಿದ್ಯಾರ್ಥಿನಿ ಬಿಬಿತಾ ಆಗಿದ್ದಾರೆ.

        ಪ್ರಸ್ತುತ ಅವರು ಪ್ರೊಟೆನ್ನಿಟಿ (ಭ್ರಾತೃತ್ವ) ಚಳವಳಿಯ ರಾಜ್ಯ ಸಮಿತಿಯ ಸದಸ್ಯೆಯೂ  ತ್ರಿಶೂರ್ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಬಿಬಿತಾ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಕಾಲೇಜು ವಿದ್ಯಾರ್ಥಿ ನೇತಾರೆಯಾಗಿ ಸಕ್ರಿಯರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries