HEALTH TIPS

ಮಾಹಿತಿ ನೀಡಲು ಶಿವಶಂಕರ್ ಒಪ್ಪಿಗೆ-ಕಸ್ಟಡಿ 6 ದಿನಗಳವರೆಗೆ ವಿಸ್ತರಣೆ

             ಕೊಚ್ಚಿ: ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಬಂಧನವನ್ನು ಜಾರಿ ನಿರ್ದೇಶನಾಲಯ ಮತ್ತೆ ವಿಸ್ತರಿಸಿದೆ. ಬಂಧನವನ್ನು ಆರು ದಿನಗಳವರೆಗೆ ವಿಸ್ತರಿಸಲಾಯಿತು. ಶಿವಶಂಕರ್ ವಿರುದ್ಧ ಪಡೆದ ಸಾಕ್ಷ್ಯಗಳ ಆಧಾರದ ಮೇಲೆ  ಬಂಧನವನ್ನು ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯವನ್ನು ಕೋರಿತ್ತು.

        ಶಿವಶಂಕರ್ ಅವರು ನ್ಯಾಯಾಲಯದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ . ಚಿನ್ನ ಕಳ್ಳಸಾಗಣೆ ಮತ್ತು ಲೈಫ್ ಮಿಷನ್ ನಡುವೆ ಸಂಬಂಧವಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಇಡಿ ಪ್ರಕಾರ, ಶಿವಶಂಕರ್ ಅವರು ಸ್ವಪ್ನಾಳಿಗೆ ಲೈಫ್ ಮಿಷನ್ ಗೆ  ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಪುರಾವೆಗಳೂ ಲಭ್ಯವಾಗಿವೆ. 

       ಶಿವಶಂಕರ್ ಅವರು ವಾಟ್ಸಾಪ್ ಚಾಟ್ ಮೂಲಕ ಲೈಫ್ ಮಿಷನ್ ನ ಮಾಹಿತಿಯನ್ನು ಸ್ವಾಪ್ನಾಳಿಗೆ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಚಾರಣೆಯ ಮೊದಲ ದಿನಗಳಲ್ಲಿ ಶಿವಶಂಕರ್ ಸಹಕರಿಸಲಿಲ್ಲ ಎಂದು ತನಿಖಾ ತಂಡ ತಿಳಿಸಿದೆ.

      ಇದೇ ವೇಳೆ ಶಿವಶಂಕರ್ ಅವರು ತಮ್ಮ ಜಾರಿ ನಿರ್ದೇಶನಾಲಯದ ಬಂಧನದ ಸಂದರ್ಭ ತನಗೆ ಯಾವುದೇ ದೈಹಿಕ ಹಿಂಸೆ ನೀಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತನಗೆ ಸಾಕಷ್ಟು ವಿಶ್ರಾಂತಿ ನೀಡಲಾಗಿದೆ ಮತ್ತು ಕಸ್ಟಡಿಯಲ್ಲಿ ಹಿಂಸಿಸಲಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಶಿವಶಂಕರ್ ಅವರನ್ನು ಏಳು ದಿನಗಳ ಕಾಲ ಬಂಧನದಲ್ಲಿಡಬೇಕೆಂದು ಇಡಿ ಒತ್ತಾಯಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries