ತಿರುವನಂತಪುರ: ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಪ್ರತಿ ಶನಿವಾರ ಹೇರಲಾಗಿದ್ದ ಬ್ಯಾಂಕ್ ರಜೆಯನ್ನು ಹಿಂತೆಗೆಯಲಾಗಿದೆ. ಎರಡು ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಇತರ ವಾರಗಳ ಶನಿವಾರದಂದು ಬ್ಯಾಂಕುಗಳು ಕಾರ್ಯವೆಸಗಲಿವೆ. ಈ ಬಗ್ಗೆ ಮಂಗಳವಾರ ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿ ಮಾಹಿತಿ ನೀಡಿದೆ.
ಎಲ್ಲಾ ಬ್ಯಾಂಕುಗಳು ಮಾಹಿತಿಯನ್ನು ಅದರ ಶಾಖೆಗಳು ಮತ್ತು ಖಾತೆದಾರರಿಗೆ ವರ್ಗಾಯಿಸಲಿವೆ. ಈ ಬಗ್ಗೆ ಬ್ಯಾಂಕರ್ಗಳ ಸಮಿತಿ ಇಂದು ನಿರ್ದೇಶನ ಹೊರಡಿಸಲಿವೆ.


