HEALTH TIPS

ಪ್ರತಿಷ್ಠಾ ಮಹೋತ್ಸವ ಆರಂಭ

          ಬದಿಯಡ್ಕ: ಮಾನ್ಯ ಶ್ರೀಅಯ್ಯಪ್ಪ ಭಜನಾ ಮಂದಿರದ  ಗರ್ಭಗುಡಿ, ಸುತ್ತುಗೋಪುರ, ಪಾಕಶಾಲೆ, ದಾಸ್ತಾನು ಕೊಠಡಿ, ಶೌಚಾಲಯ, ಸ್ನಾನಗೃಹ ಇತ್ಯಾದಿಗಳನ್ನು ಪುನಃ ನವೀಕರಿಸಿ ಪುನಃ ಪ್ರತಿಷ್ಠಾ ಮಹೋತ್ಸವ ಇದೇ ನವಂಬರ್ 30 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸ್ಥಳೀಯ ವಿವಿಧ ಸಂಘಸಂಸ್ಥೆ ಮಹನೀಯರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ರಾತ್ರಿ ಸುದರ್ಶನ ಹೋಮ ನಡೆಯಿತು.

       ಇಂದು ಬೆಳಿಗ್ಗೆ 7 ರಿಂದ ತಿಲಹೋಮ, ಸಾಯುಜ್ಯಪೂಜೆ ನಡೆಯಿತು. ನಾಳೆ(ಭಾನುವಾರ)ರಾತ್ರಿ 8 ರಿಂದ ವಾಸ್ತುಬಲಿ, ರಾಕ್ಷೋಘ್ನ ಹೋಮ ನಡೆಯಲಿದೆ. ನವೆಂಬರ್ 30 ರಂದು ಸೋಮವಾರ ಬೆಳಿಗ್ಗೆ 7 ರಿಂದ ಮಲ್ಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಆನೆಮಜಲು ವಿಷ್ಣು ಭಟ್ ಅವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಪುನಃ ಪ್ರತಿಷ್ಠಾ ಮಹೋತ್ಸವ ಆರಂಭಗೊಂಡು ಬಳಿಕ 108 ಕಾಯಿ ಗಣಪತಿಹೋಮ ನೆರವೇರಲಿದೆ. ಜೊತೆಗೆ ವಿವಿಧ ಸಂಘಸಂಸ್ಥೆಗಳಿಂದ ಭಜನಾ ಸಂಕೀರ್ತನೆ ಮಧ್ಯಾಹ್ನ 12.37ರ ಶುಭಮುಹೂರ್ತದಲ್ಲಿ ಶ್ರೀಅಯ್ಯಪ್ಪ ದೇವರ ಪ್ರತಿಷ್ಠೆ, ಮಹಾಪೂಜೆ, ಪ್ರಸಾದ ಭೋಜನ, ವಿವಿಧ ತಂಡಗಳಿಂದ ಭಜನೆ ನಡೆಯಲಿದೆ. ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries