HEALTH TIPS

ಪ್ರಕರಣದಲ್ಲಿ ಭಾಗಿಗಳಾದ ಉನ್ನತ ವ್ಯಕ್ತಿಗಳ ಹೆಸರು ಬಹಿರಂಗಪಡಿಸಲು ಅಧಿಕಾರಿಗಳಿಂದ ಒತ್ತಡ-ಜೀವ ಭಯ: ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್

                     

            ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಜೀವಕ್ಕೆ ಅಪಾಯವಿದೆ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. ನಾವು ಪೆÇಲೀಸ್ ಅಧಿಕಾರಿಗಳು ಎಂದು ತಿಳಿಸಿ  ಕೆಲವರು ಜೈಲಿಗೆ ಭೇಟಿ ನೀಡಿ ಪ್ರಕರಣದಲ್ಲಿ ಭಾಗಿಯಾಗಿರುವ ಉನ್ನತ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸುವಂತೆ ಕೇಳಿಕೊಂಡರು. ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಡಿ ಎಂದು ಸ್ವಪ್ನಾ ನ್ಯಾಯಾಲಯಕ್ಕೆ ತಿಳಿಸಿದ್ದು ತನಗೂ ತನ್ನ ಕುಟುಂಬಕ್ಕೂ ಅಪಾಯವಿದೆ ಎಂದು ಅವಲತ್ತುಕೊಂಡ ಘಟನೆ ನಿನ್ನೆ ನಡೆದಿದೆ. ನವೆಂಬರ್ 25 ರ ಮೊದಲು ಹಲವಾರು ಬೆದರಿಕೆಗಳು ಬಂದಿದ್ದವು ಎಂದು ಸ್ವಪ್ನಾ ತಿಳಿಸಿದ್ದು ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಗೌಪ್ಯ ಹೇಳಿಕೆ ಸಲ್ಲಿಸುವ ಮೊದಲು ಈ ಆತಂಕಕಾರಿ ವಿವರಗಳು ಬಹಿರಂಗವಾಗಿದೆ.

        ತಿರುವನಂತಪುರದ ಅಟ್ಟಕ್ಕುಳಂಗರ ಜೈಲಿನಲ್ಲಿದ್ದಾಗ ಕೆಲವರು ಬಂದು ಭೇಟಿಯಾಗಿದ್ದರು. ಬಂದವರು ಜೈಲು ಪೆÇಲೀಸ್ ಅಧಿಕಾರಿಗಳಂತೆ ಕಾಣುತ್ತಾರೆ. ಕಸ್ಟಮ್ಸ್ ಕಸ್ಟಡಿ ಅವಧಿಯ ನಂತರ, ಮರಳಿ ಅಟ್ಟಕ್ಕುಳಂಗರ ಜೈಲಿಗೆ ಹೋಗಬೇಕಾಗುತ್ತದೆ. ಅಲ್ಲಿ ತನ್ನ ಜೀವಕ್ಕೆ ಅಪಾಯದ ಸಾಧ್ಯತೆ ಇದೆ. ಆದ್ದರಿಂದ ರಕ್ಷಣೆ ಬೇಕು ಎಂದು ಸ್ವಪ್ನಾ ಸುರೇಶ್ ಹೇಳಿಕೆ ನೀಡಿದ್ದಾಳೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries