HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣ: ಎಂ. ಶಿವಶಂಕರ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದ ಎರ್ನಾಕುಳಂ ಎಸಿಜೆಎಂ ನ್ಯಾಯಾಲಯ

                 

       ಕೊಚ್ಚಿ: ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ಕಸ್ಟಮ್ಸ್ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಲಾಗಿದೆ. ಎರ್ನಾಕುಳಂ ಎಸಿಜೆಎಂ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಶಿವಶಂಕರ್ ಕಳ್ಳಸಾಗಣೆಯಲ್ಲಿ ಮುಖ್ಯವಾಗಿ ಭಾಗಿಯಾಗಿದ್ದಾನೆ ಎಂದು ನ್ಯಾಯಾಲಯ ಹೇಳಿದೆ.

       ಸ್ವಪ್ನಾಳೊಂದಿಗೆ ಎಂ. ಶಿವಶಂಕರ್ ಅವರ ವಿದೇಶ ಪ್ರವಾಸಗಳನ್ನು ಕಸ್ಟಮ್ಸ್ ನ್ಯಾಯಾಲಯದಲ್ಲಿ ಉಲ್ಲೇಖಿಸಿದೆ. ಏಳು ವಿದೇಶ ಪ್ರಯಾಣಕ್ಕೆ ಸ್ವತಃ ತಾನೇ ಹಣ ನೀಡಿರುವುದಾಗಿ ಶಿವಶಂಕರ್ ತಿಳಿಸಿದ್ದರು. ಹೀಗೆ ಸ್ವಂತ ಹಣ ಖರ್ಚು ಮಾಡುವ ಅಗತ್ಯ ಏನೆಂಬುದನ್ನು ಬಹಿರಂಗಪಡಿಸುವಂತೆ ಮತ್ತು ಇನ್ನೂ ಬಹಿರಂಗಗೊಳ್ಳಬೇಕಾದ ಮುಖ್ಯ ವಿಷಯಗಳು ಸಾಕಷ್ಟಿವೆ ಎಂದು ಕಸ್ಟಮ್ಸ್ ನ್ಯಾಯಾಲಯದಲ್ಲಿ ವಾದಿಸಿತು.

         ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಸ್ಥಾನ ಸೇರಿದಂತೆ ಅಧಿಕಾರವು ದುರುಪಯೋಗವಾಗಿದೆ. ಶಿವಶಂಕರ್‍ಗೆ ಜಾಮೀನು ನೀಡಿದರೆ, ಸಾಕ್ಷ್ಯಗಳನ್ನು ನಾಶಮಾಡುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಸ್ವಪ್ನಾ, ಸರಿತ್ ಮತ್ತು ಸಂದೀಪ್ ನಾಯರ್ ಅವರ ಜೀವಕ್ಕೂ ಅಪಾಯವಿದೆ. ಶಿವಶಂಕರ್ ಇನ್ನೂ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕಸ್ಟಮ್ಸ್ ನ್ಯಾಯಾಲಯ ಹೇಳಿದೆ.

         ಆದರೆ, ಕಸ್ಟಮ್ಸ್ ತನ್ನ ಗ್ರಾಹಕನ ವಿರುದ್ಧ ಯಾವುದೇ ಪುರಾವೆಗಳನ್ನು ಪಡೆದಿಲ್ಲ ಮತ್ತು ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ಅವರಿಗೆ ಜಾಮೀನು ನೀಡಬೇಕು ಎಂದು ಶಿವಶಂಕರ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಮಧ್ಯೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries