HEALTH TIPS

ತ್ರಿಸ್ಥರ ಪಂಚಾಯತಿ ಚುನಾವಣೆ-ಕೋವಿಡ್ ಮಾನದಂಡಗಳನ್ನು ಪಾಲಿಸಿಲ್ಲ- ಇನ್ನೂ ಜಾಗರೂಕರಾಗಿರದಿದ್ದರೆ ಅನೇಕ ಸ್ಥಳಗಳಲ್ಲಿ ಉಪಚುನಾವಣೆ ನಡೆಯಲಿದೆ-ಸಚಿವ ಎಂ.ಎಂ.ಮಣಿ!

            

        ಇಡುಕ್ಕಿ: ತ್ರಿಸ್ಥರ  ಪಂಚಾಯತ್ ಚುನಾವಣೆಯಲ್ಲಿ ಕೋವಿಡ್  ಹಿನ್ನೆಲೆಯ ಯಾವುದೇ ಮಾನದಂಡಗಳನ್ನು ರಾಜಕೀಯ ನಾಯಕರು, ಕಾರ್ಯಕರ್ತರು ಪಾಲಿಸದಿರುವುದು ಗಮನಕ್ಕೆ ಬಂದಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರೋಗ ಹರಡುವಿಕೆಗೆ ಕಾರಣವಾಗುತ್ತದೆ ಎಂದು ವಿದ್ಯುತ್ ಸಚಿವ ಎಂ.ಎಂ.ಮಣಿ ಹೇಳಿದ್ದಾರೆ. ಇಡುಕ್ಕಿಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಟ್ಟಣೆ ಬಗ್ಗೆ ಜಿಲ್ಲೆಯ ಜನರು ಚಿಂತಿತರಾಗಿದ್ದಾರೆ ಎಂದು ಅವರು ಹೇಳಿರುವರು.

        ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಜನರು ಯಾವುದೇ ಚಿಂತೆಗಳಿಲ್ಲದೆ ಬೇಕಾಬಿಟ್ಟಿಯಾಗಿ ಪ್ರಚಾರ ಸಹಿತ ಎಲ್ಲಾ ಚಟುವಟಿಕೆಗಳಲ್ಲಿ ಕೋವಿಡ್ ನ್ನು ಮರೆತಿರುವುದು ಖಚಿತವಾಗಿದೆ. ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಜಾಗರೂಕರಾಗಿರಬೇಕು. ಅಲಲ್ದೆ ನೂತನವಾಗಿ ಆಯ್ಕೆಯಾಗಿರುವ ಪಂಚಾಯತ್ ಸದಸ್ಯರು ಇನ್ನೂ ಜಾಗರೂಕರಾಗಿರದಿದ್ದರೆ ಹಲವು ಸ್ಥಳಗಳಲ್ಲಿ ಉಪಚುನಾವಣೆ ನಡೆಸಬೇಕಾಗುತ್ತದೆ ಎಂದು ಸಚಿವರು ಹೇಳಿದರು.

         ಇಡುಕ್ಕಿ ಜಿಲ್ಲೆಯು ಇತರ ಜಿಲ್ಲೆಗಳಿಗಿಂತ ಹೆಚ್ಚು ಕೋವಿಡ್ ಭೀತಿಯಲ್ಲಿದೆ. ಪ್ರವಾಸಿ ತಾಣಗಳು ತೆರೆಯುವುದರೊಂದಿಗೆ ದೇಶದಾದ್ಯಂತ ಜನರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಇಡುಕ್ಕಿಯಲ್ಲಿ ಸೋಂಕು ಇನ್ನಷ್ಟು ಹರಡುವುದರಲ್ಲಿ ಸಂದೇಹವಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿರುವರು.

         ಜಿಲ್ಲೆಯ ಶಾಲೆಗಳನ್ನು ಅತ್ಯಂತ ಜಾಗರೂಕತೆಯಿಂದ ತೆರೆಯಲಾಗುತ್ತಿದ್ದು, ಈ ಉದ್ದೇಶಕ್ಕಾಗಿ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸುವ ಮೂಲಕ ವಿಶೇಷ ಕಾರ್ಯಪಡೆಗಳನ್ನು ರಚಿಸಲಾಗಿದೆ ಎಂದು ಸಚಿವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries