HEALTH TIPS

ರಾಜ್ಯ ಕ್ರೀಡಾ ಮಂಡಳಿಯ 2019 ರ ರಾಜ್ಯ ಕ್ರೀಡಾ ಪ್ರಶಸ್ತಿಗಳ ಪ್ರಕಟ-ಬೇಬಿ ಮುಹಮ್ಮದ್, ಮಯೂಕ್ ಜಾನಿಗೆ ಜಿ.ವಿ.ರಾಜ್ ಪುರಸ್ಕಾರ

     

       ತಿರುವನಂತಪುರ: ರಾಜ್ಯ ಕ್ರೀಡಾ ಮಂಡಳಿಯ 2019 ರ ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಕ್ರೀಡಾಪಟು ಬೇಬಿ ಮುಹಮ್ಮದ್ ಮತ್ತು ಮಯೂಕ್ ಜಾನಿ ಜಿ.ವಿ.ರಾಜ್‍ಪುರ ಅರ್ಹರಿಗೆ ಗೌರವ ಪ್ರಶಸ್ತಿ ಸಂದಿದ್ದು,  ಕ್ರೀಡಾ ಸಚಿವ ಇ.ಪಿ. ಜಯರಾಜನ್ ನಿನ್ನೆ ಪ್ರಶಸ್ತಿಗಳನ್ನು ಘೋಷಿಸಿದರು.


            ಪ್ರಶಸ್ತಿಯು 3 ಲಕ್ಷ ರೂ. ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರವನ್ನು ಹೊಂದಿದೆ. ಬಾಸ್ಕೆಟ್‍ಬಾಲ್ ತಾರೆ ಪಿ.ಎಸ್. ಜೀನ್ ತೀರ್ಪುಗಾರರಿಂದ ವಿಶೇಷ ಉಲ್ಲೇಖ ಮತ್ತು ಅನುಮೋದನೆಯನ್ನು ಪಡೆದರು.

          ಒಲಿಂಪಿಯನ್ ಸುರೇಶ್ ಬಾಬು ಜೀವಮಾನ ಸಾಧನೆ ಪ್ರಶಸ್ತಿ,  ಬಾಂಚಂದ್ರ ಲಾಲ್ ಅವರಿಗೆ ಬಾಕ್ಸಿಂಗ್ ತರಬೇತಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು 2 ಲಕ್ಷ ರೂ. ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರವನ್ನು ಹೊಂದಿದೆ. ವಾಲಿಬಾಲ್ ಅತ್ಯುತ್ತಮ ಕ್ರೀಡಾ ತರಬೇತುದಾರ ಆನಿಲ್ ಕುಮಾರ್ ಅವರಿಗೆ ಪ್ರಶಸ್ತಿ ಆರಿಸಿಬಂದಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರವನ್ನು ಹೊಂದಿದೆ.

           ಅತ್ಯುತ್ತಮ ದೈಹಿಕ ಶಿಕ್ಷಕರಿಗಾಗಿ ಚಂಗನಾಶ್ಚೇರಿ ಅಸಂಪ್ಷನ್ ಕಾಲೇಜಿನ ಸುಜಾ ಮೇರಿ ಜೋರ್ಜ್ ಅವರಿಗೆ  ಪ್ರಶಸ್ತಿ ಲಭ್ಯವಾಗಿದ್ದು, ಅತ್ಯುತ್ತಮ ದೈಹಿಕ ಸಾಧನೆಯ ಕಾಲೇಜು ಕಣ್ಣೂರಿನ ಎಸ್.ಎಲ್. ಕಾಲೇಜಿನೊಂದಿಗೆ ಪಾಲಕ್ಕಾಡ್ ಜಿಲ್ಲೆಯ ಮತ್ತೂರ್ ಸಿಎಫ್‍ಡಿಎಚ್‍ಸಿ ಸಹ ಆಯ್ಕೆಯಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries