ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ವತಿಯಿಂದ ಉದ್ಯೋಗ ಮಾಹಿತಿ ಮಾರ್ಗದರ್ಶನ ಉಚಿತ ಶಿಬಿರ ಫೆ. 28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಬ್ಯಾಂಕ್ ರಸ್ತೆಯ ಕಸಾಪ ಕಚೇರಿಯಲ್ಲಿ ಜರಗಲಿರುವುದು.
ಕೇರಳ ಲೋಕಸೇವಾ ಆಯೋಗ(ಪಿಎಸ್ಸಿ)ಕ್ಕೆ ಅರ್ಜಿ ಸಲ್ಲಿಸುವ , ಪರೀಕ್ಷೆ-ಸಂದರ್ಶನ, ನೇಮಕಾತಿ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು. ಎಸ್ಸೆಸೆಲ್ಸಿ, ಪ್ಲಸ್ಟು, ಪದವಿ, ಡಿಪ್ಲೊಮಾ, ಐಟಿಐ ಆಗಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಒಗೆ ಗಣೇಶ್ ಪ್ರಸಾದ್ ಪಾಣೂರು(9496237601)ಅವರನ್ನು ಸಂಪರ್ಕಿಸುವಂತೆ ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




