ಚಮೋಲಿ: ಹಿಮ ಕುಸಿತದಿಂದ ತೀವ್ರ ಪ್ರವಾಹ ಉಂಟಾಗಿ ಸಾಕಷ್ಟು ಸಾವು ನೋವು ಸಂಭವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.
ಚಮೋಲಿ ಜಿಲ್ಲೆಯ ತಪೋವನದಲ್ಲಿ ರಕ್ಷಣಾ ಕಾರ್ಯಾಚರಣೆ ಇಂದು ಆರನೇ ದಿನಕ್ಕೆ ಕಾಲಿಟ್ಟಿದ್ದು, ಇದುವರೆಗೆ 36 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ 204 ಮಂದಿ ಕಣ್ಮರೆಯಾಗಿದೆ ಎಂದು ಉತ್ತರಾಖಂಡದ ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಬಡೋರಿಯಾ ತಿಳಿಸಿದ್ದಾರೆ.
ನಮ್ಮ ಶೋಧ ತಂಡ ನಿರಂತರವಾಗಿ ಕಣ್ಮರೆಯಾದವರ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ನದಿಯಲ್ಲಿ ಕೂಡ ತಂಡವೊಂದು ಹುಡುಕಾಟ ಮುಂದುವರಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಎನ್ ಡಿಆರ್ ಎಫ್ ಕಮಾಂಡರ್ ಪಿ ಕೆ ತಿವಾರಿ ತಪೋವನ ಸುರಂಗದಲ್ಲಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.