HEALTH TIPS

ತಾನೇಕೆ ಬಿಜೆಪಿಗೆ ಬಂದೆ-ಮೆಟ್ರೋಮ್ಯಾನ್ ಶ್ರೀಧರನ್ ಹೇಳಿದ್ದು ಏನು?

       ಕೊಚ್ಚಿ: ಇತ್ತೀಚೆಗೆ ಬಿಜೆಪಿಗೆ ಸೇರಿದ ಮೆಟ್ರೊಮನ್ ಇ ಶ್ರೀಧರನ್ ಅವರು ತಮ್ಮ ಶಾಲಾ ದಿನದಿಂದಲೂ ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ ಎಂದು ಹೇಳಿರುವರು.     ತನ್ನಲ್ಲಿ ನೀವೆಲ್ಲ ಗುರುತಿಸುವ ಮೌಲ್ಯಗಳೇನಾದರೂ ಇದ್ದರೆ ಅದು 
ಆರ್‌ಎಸ್‌ಎಸ್ ನಿಂದ ಲಭ್ಯವಾದುದಾಗಿದೆ ಎಂದವರು ತಿಳಿಸಿದ್ದಾರೆ.
      ತನ್ನ  ಅಧಿಕೃತ ಉದ್ಯೋಗದೊಂದಿಗೆ   ರಾಜಕೀಯವನ್ನು ಬೆರೆಸಲು ಆಸಕ್ತಿ ಇಲ್ಲದ ಕಾರಣ ಈವರೆಗೂ ತಟಸ್ಥ ನಿಲುವನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಶ್ರೀಧರನ್ ಹೇಳಿದರು. 
       ಆರ್‌ಎಸ್‌ಎಸ್ ಮುಖವಣಿ ಕೇಸರಿ ಪ್ರಕಟಿಸಿದ ಸಂದರ್ಶನದಲ್ಲಿ ಇ ಶ್ರೀಧರನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
          ಪಾಲಕ್ಕಾಡ್ ನ  ಶಾಲಾ ಶಿಕ್ಷಣದ ಸಮಯದಲ್ಲಿ ಸಂಘದೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಇದು ಎರಡನೇ ತರಗತಿಯಿಂದ ತೊಡಗಿ ಹತ್ತನೇ ತರಗತಿಯವರೆಗೂ ಮತ್ತು ವಿಕ್ಟೋರಿಯಾ ಕಾಲೇಜಿನಲ್ಲಿ ಮಧ್ಯಂತರ ಅವಧಿಯಲ್ಲಿ ಮುಂದುವರೆಯಿತು. ಆ ಸಮಯದಲ್ಲಿ ಪ್ರಚಾರಕ್ ಆಗಿದ್ದ ನೀಲಂಬೂರ್ ಕೋವಿಲಕಂನ ಟಿ.ಎನ್.ಭರತನ್ ಮತ್ತು ರಾ. ವೇಣುಗೋಪಾಲ್ ಅವರು ತರಬೇತಿ      ನೀಡಿದ್ದರು.
            ನನ್ನಲ್ಲಿರುವ ಎಲ್ಲ ಮೌಲ್ಯಗಳಿಗೆ ಆರ್‌ಎಸ್‌ಎಸ್ ಆಧಾರವಾಗಿದೆ. ಮೋಹನ್ ಭಾಗವತ್ ಅವರು ಕೇರಳಕ್ಕೆ ಬಂದಾಗ, ಈ ಬಗ್ಗೆಯೂ ಅವರಿಗೆ ತಿಳಿಸಿದ್ದೆ ಎಂದು  ಶ್ರೀಧರನ್ ಸಂದರ್ಶನದಲ್ಲಿ ಹೇಳುತ್ತಾರೆ.
         ರಾಷ್ಟ್ರೀಯ ಭದ್ರತೆಯ ನಾಲ್ಕನೇ ಆಧಾರಸ್ತಂಭ ಆರ್‌ಎಸ್‌ಎಸ್ ಆಗಿದೆ ಎಂದ ನ್ಯಾಯಮೂರ್ತಿ ಕೆ.ಟಿ.ಥಾಮಸ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ದೇಶದ ನೈತಿಕ ಮೌಲ್ಯಗಳನ್ನು ಎಲ್ಲರಿಗೂ ತಿಳಿಸುವ ಗುರಿ ಅದು  ಹೊಂದಿದೆ.
‌‌‌‌‌‌‌‌‌ಅದಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಂಡೆ.
      ನರೇಂದ್ರ ಮೋದಿಯವರು ದೇಶ ಮತ್ತು ಸಮಾಜದ ಬಗ್ಗೆ ಅಚಲವಾದ ಪ್ರೀತಿ, ದೃಢ ನಿಶ್ಚಯ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಅನುಕರಣೀಯವಾಗಿದೆ.ನಾನು ಅವರಿಂದ ಕಲಿತ ಪಾಠಗಳು ಇವುಗಳಾಗಿವೆ. ಇವೆಲ್ಲವೂ ಸಮಾಜದಲ್ಲಿ ಹರಡಬೇಕಿದೆ ”ಎಂದು ಶ್ರೀಧರನ್ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries