ಪೆರ್ಲ: ಜನಪರ ಅಭಿವೃದ್ಧಿ ವಿಜ್ಞಾನ ಸೆಮಿನಾರ್ ಇತ್ತೀಚೆಗೆ ಕುರಡ್ಕದ ಸಮಾಜಸೇವಕ, ಸಾಮಾಜಿಕ ಮುಂದಾಳು ಕೆ.ಪಿ ಮದನ ಮಾಸ್ಟರ್ ಸ್ಮಾರಕ ಗ್ರಂಥಾಲಯದಲ್ಲಿ ಜರುಗಿತು.
ಎಣ್ಮಕಜೆ ಗ್ರಾಪಂ ಸದಸ್ಯೆ ಸೌದಾಬಿ ಹನೀಫ್ ಉದ್ಘಾಟಿಸಿದರು. ಕೆ.ಪಿ ಮದನ್ಮಾಸ್ಟರ್ ಸ್ಮಾರಕ ಗ್ರಂಥಾಲಯ ಸಮಿತಿ ಅಧ್ಯಕ್ಷ ಹರೀಶ್ ಸೇರಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ತಾಲೂಕು ಗ್ರಂಥಾಲಯ ಸಮಿತಿ ಸದಸ್ಯೆ ಗಿರಿಜಾತಾರಾನಾಥ್ ವಿಷಯ ಮಂಡನೆ ನಡೆಸಿದರು.
ಎಣ್ಮಕಜೆ ಗ್ರಂಥಾಲಯ ಸಮಿತಿ ಸಂಚಾಲಕ ರಾಮಕೃಷ್ಣ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಸಲಾಹುದ್ದೀನ್ ಮಾಸ್ಟರ್ ಸ್ವಾಗತಿಸಿದರು. ಗ್ರಂಥಪಾಲಿ ಶಾರದಾ ವಂದಿಸಿದರು. ಈ ಸಂದರ್ಭ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.