ಕಾಸರಗೋಡು: ಕೋವಿಡ್-19 ಆ್ಯಂಡ್ ನ್ಯೂಟ್ರೀಷಿಯನ್ ಎಂಬ ವಿಷಯದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಜನಜಾಗೃತಿ ವಿಚಾರಸಂಕಿರಣ ಬಳಾಂತೋಡು ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಲೆಗಳಲ್ಲಿ ಕೋವಿಡ್ ಸೋಂಕು ಹರಡದಂತೆ ತಡೆಯುವ, ಯುವಜನತೆಯ ಆರೋಗ್ಯ ಸಂರಕ್ಷಣೆ ಇತ್ಯಾದಿ ಉದ್ದೇಶಗಳೊಂದಿಗೆ ಜಿಲ್ಲಾ ಮೆಡಿಕಲ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಎಜುಕೇಶನ್ ಆ್ಯಂಡ್ ಮೀಡಿಯಾ ಆಫೀಸರ್ ಅಬ್ದುಲ್ ಲತೀಫ್ ಮಠತ್ತಿಲ್ ಸಮಾರಂಭ ಉದ್ಘಾಟಿಸಿದರು. ಶಾಲಾ ಪ್ರಾಂಶುಪಾಲ ಎಂ.ಗೋವಿಂದನ್ ಅಧ್ಯಕ್ಷತೆ ವಹಿಸಿದ್ದರು. ಶಂಭುದಾಸ್ ಪಿ., ಬಿಜು ಜೋಸೆಫ್, ಸುನಿಲ್ಕುಮಾರ್ ವಿ., ಚಂದ್ರನ್ ಬಿ., ರಂಜಿತ್ ಕೆ.ಪಿ. ಉಪಸ್ಥಿತರಿದ್ದರು. ಸಮಾಜ ಕಾರ್ಯ ಅಸೊಸಿಯೇಶನ್ ಬಳಾಂತೋಡು ಕಾರ್ಯದರ್ಶಿವಿಷ್ಣುದಾಸ್ ಸ್ವಾಗತಿಸಿದರು. ಅಧ್ಯಕ್ಷೆ ನಿಖಿಲಾ ವಂದಿಸಿದರು.ಜಿಲ್ಲಾ ಕೋವಿಡ್ 19 ನಿಯಂತ್ರಣ ಘಟಕದ ನೋಡೆಲ್ ಅಧಿಕಾರಿ ಡಾ.ಡಾಲ್ಮಿಟ್ಟ ನಿಯಾ ಜೇಮ್ಸ್, ಸಹಾಯಕ ಜಿಲ್ಲಾ ಎಜ್ಯುಕೇಶನ್ ಆಂಡ್ ಮೀಡಿಯಾ ಆಫೀಸರ್ ಸಯನಾ ಎಸ್.ಪೂಡಂಗಲ್ಲ್, ತಾಲೂಕು ಆಸ್ಪತ್ರೆ ಡಯಟೀಷಿಯನ್ ಮೃದುಲಾಅರವಿಂದ್, ರಾಷ್ಟ್ರೀಯ ಆರೋಗ್ಯ ನಿರ್ವಹಣೆ ಜ್ಯೂನಿಯರ್ ಕನ್ಸಲ್ಟೆಂಟ್ ಕಮಲ್ ಕೆ. ಜೋಸ್ ತರಗತಿ ನಡೆಸಿದರು.