ತಿರುವನಂತಪುರ: ಕೊರೋನಾ ಜಾಗೃತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಪಿಆರ್ ಏಜೆನ್ಸಿಗೆ ಲಕ್ಷ ರೂ.ಗಳನ್ನು ವೆಚ್ಚಮಾಡಿದೆ ಎಂಬ ಅಂಶಗಳು ಇದೀಗ ಬಹಿರಂಗಗೊಂಡಿದೆ. ಈವರೆಗೆ ಸುಮಾರು 15 ಕೋಟಿ ರೂ. ಗಳನ್ನು ಪ್ರಚಾರಕ್ಕಾಗಿ ಬಳಸಲಾಗಿರುವುದು ತಿಳಿದುಬಂದಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ತನ್ನ ಗ್ಲೋಬಲ್ ಇನ್ನೋವೇಟಿವ್ ಟೆಕ್ನಾಲಜೀಸ್ ಗೆ ಹಣವನ್ನು ಹಂಚಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.ಈ ಬಗ್ಗೆ ಋಜುಗೊಳಿಸುವ ಆದೇಶದ ಪ್ರತಿ ಪೀಪಲ್ ಟಿವಿಗೆ ಲಭ್ಯವಾಗಿದೆ.
ಕಳೆದ ಒಂದು ವರ್ಷದಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳಿಗೆ ಕೋಟಿ ಖರ್ಚು ಮಾಡುತ್ತಿದೆ. ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ ಮೂರು ಕೋಟಿ ರೂ.ಖರ್ಚುಮಾಡಿದ್ದರೆ, ಕೊರೋನಾ ಜಾಗೃತಿಯ ಹೆಸರಿನಲ್ಲಿ ಪಿಆರ್ ಏಜೆನ್ಸಿಗೆ ಸಹ ಕೋಟಿ ರೂ. ನೀಡಲಾಗಿದೆ ಎಂಬುದಕ್ಕೆ ಈಗ ಪುರಾವೆಗಳು ಹೊರಬರುತ್ತಿವೆ. ಬ್ರೇಕ್ ದಿ ಚೈನ್ ಅಭಿಯಾನಕ್ಕಾಗಿ ಸರ್ಕಾರವು ತನ್ನ ಗ್ಲೋಬಲ್ ಇನ್ನೋವೇಟಿವ್ ಟೆಕ್ನಾಲಜೀಸ್ ಗೆ ರೂ 146,66,000 ನ್ನು ಮಂಜೂರು ಮಾಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಸರ್ಕಾರ ಮೊನ್ನೆ ಈ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೇ ಯೋಜನೆ ಎಂದು ಬಿಂಬಿಸಲು ರಾಜ್ಯವು ಕೋಟಿ ಖರ್ಚು ಮಾಡಿದೆ ಎಂದು ತೋರಿಸುವ ಅಂಕಿಅಂಶಗಳನ್ನು ಈ ಹಿಂದೆಯೇ ಬಹಿರಂಗಗೊಳಿಸಲಾಗಿತ್ತು. ಒಂದೆಡೆ, ಆರ್ಥಿಕ ಬಿಕ್ಕಟ್ಟಿನ ಹೆಸರಿನಲ್ಲಿ ಸಾಮಾನ್ಯ ಜನರನ್ನು ಹಿಸುಕುವ ಸರ್ಕಾರ ಖಾಸಗಿ ಪಿಆರ್ ಏಜೆನ್ಸಿಗಳ ಮೂಲಕ ಪ್ರಚಾರಕ್ಕೆ ಹಣ ಪೋಲುಮಾಡುತ್ತಿರುವುದು ತೀವ್ರ ಟೀಕೆಗೆ ಒಳಗಾಗಿದೆ.