HEALTH TIPS

ರಾಜ್ಯದಲ್ಲಿ ಇಂದು 2357 ಮಂದಿಗೆ ಕೋವಿಡ್: 24 ಗಂಟೆಗಳಲ್ಲಿ 40,191 ಮಾದರಿಗಳ ಪರೀಕ್ಷೆ: ಕಾಸರಗೋಡು:144 ಮಂದಿಗೆ ಸೋಂಕು ಪತ್ತೆ

                            

         ತಿರುವನಂತಪುರ: ರಾಜ್ಯದಲ್ಲಿ ಇಂದು 2357 ಮಂದಿ ಜನರಿಗೆ ಕೋವಿಡ್ -19 ಖಚಿತವಾಗಿದೆ. ಕೋಝಿಕೋಡ್ 360, ಎರ್ನಾಕುಳಂ 316, ತಿರುವನಂತಪುರ 249, ಕಣ್ಣೂರು 240, ಮಲಪ್ಪುರಂ 193, ತ್ರಿಶೂರ್ 176, ಕೊಟ್ಟಾಯಂ 164, ಕಾಸರಗೋಡು 144, ಕೊಲ್ಲಂ 142, ಪಾಲಕ್ಕಾಡ್ 113, ಆಲಪ್ಪುಳ 110, ಇಡುಕ್ಕಿ 66, ಪತ್ತನಂತಿಟ್ಟು 45, ವಯನಾಡ್ 39 ಎಂಬಂತೆ ಸೋಂಕು ಖಚಿತಪಡಿಸಲಾಗಿದೆ.


          ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 111 ಜನರಿಗೆ ಈವರೆಗೆ ದೃಢಪಡಿಸಲಾಗಿದೆ. ಈ ಪೈಕಿ 104 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 40,191 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ಶೇ.ದರ 5.86 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,33,95,135 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

          ಕಳೆದ 24 ಗಂಟೆಗಳಲ್ಲಿ 12 ಮಂದಿ  ಕೋವಿಡ್ -19 ಬಾಧಿಸಿ ಮೃತಪಟ್ಟಿರುವುದು ದೃಢಪಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ ಇದೀಗ 4,680 ಕ್ಕೆ ಏರಿಕೆಯಾಗಿದೆ. 

         ಇಂದು, ಸೋಂಕು ಪತ್ತೆಯಾದವರಲ್ಲಿ 104 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2061 ಮಂದಿ ಜನರಿಗೆ ಸೋಂಕು ತಗಲಿತು. 183 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 347, ಎರ್ನಾಕುಳಂ 296, ತಿರುವನಂತಪುರ 193, ಕಣ್ಣೂರು 178, ಮಲಪ್ಪುರಂ 184, ತ್ರಿಶೂರ್ 169, ಕೊಟ್ಟಾಯಂ 135, ಕಾಸರಗೋಡು 132, ಕೊಲ್ಲಂ 137, ಪಾಲಕ್ಕಾಡ್ 52, ಆಲಪ್ಪುಳ 105, ಇಡುಕ್ಕಿ 61, ಪತ್ತನಂತಿಟ್ಟು 36, ವಯನಾಡ್ 36 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಲ್ಪಟ್ಟಿದೆ. 

        ಇಂದು ಒಂಬತ್ತು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ತಿರುವನಂತಪುರ, ಎರ್ನಾಕುಳಂ, ಕಣ್ಣೂರು ತಲಾ 2, ತ್ರಿಶೂರ್, ವಯನಾಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಕೋವಿಡ್ ಕಂಡುಬಂದಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1866 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 127, ಕೊಲ್ಲಂ 127, ಪತ್ತನಂತಿಟ್ಟು 108, ಆಲಪ್ಪುಳ 132, ಕೊಟ್ಟಾಯಂ 221, ಇಡಕ್ಕಿ 61, ಎರ್ನಾಕುಳಂ 150, ತ್ರಿಶೂರ್ 164, ಪಾಲಕ್ಕಾಡ್ 53, ಮಲಪ್ಪುರಂ 208, ಕೊಝಿಕೋಡ್ 302, ವಯನಾಡ್ 42, ಕಣ್ಣೂರು 112, ಕಾಸರಗೋಡು 59 ಎಂಬಂತೆ ಇಂದು ನೆಗೆಟಿವ್ ಆಗಿದೆ. ಇದರೊಂದಿಗೆ, 28,372 ಮಂದಿ ಜನರಿಗೆ  ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,04,225 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,46,346 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,41,803 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 4,543 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 683 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

         ಇಂದು 2 ಹೊಸ ಹಾಟ್‍ಸ್ಪಾಟ್‍ಗಳಿವೆ. ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 360 ಹಾಟ್‍ಸ್ಪಾಟ್‍ಗಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries