HEALTH TIPS

ಕಳವಳಕಾರಿ ಕೋವಿಡ್ ಆಟೋಪ: ರಾಜ್ಯದಲ್ಲಿ ಇಂದು 4353 ಮಂದಿಗೆ ಸೋಂಕು: ಕಾಸರಗೋಡು: 234 ಮಂದಿಗೆ ಕೊರೊನಾ ಪತ್ತೆ

                                        

          ತಿರುವನಂತಪುರ: ತೀವ್ರ ಕಳವಳಕಾರಿ ವಾತಾವರಣದ ನಡುವೆ  ರಾಜ್ಯದಲ್ಲಿ ಇಂದು 4353 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಎರ್ನಾಕುಳಂ 654, ಕೋಝಿಕೋಡ್ 453, ತಿರುವನಂತಪುರ 444, ತ್ರಿಶೂರ್ 393, ಮಲಪ್ಪುರಂ 359, ಕಣ್ಣೂರು 334, ಕೊಟ್ಟಾಯಂ 324, ಕೊಲ್ಲಂ 279, ಆಲಪ್ಪುಳ  241, ಕಾಸರಗೋಡು 234, ಪಾಲಕ್ಕಾಡ್ 190, ವಯನಾಡ್  176, ಪತ್ತನಂತಿಟ್ಟು 147, ಇಡುಕ್ಕಿ 125 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

             ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ  ಕೋವಿಡ್ ಖಚಿತಪಡಿಸಿಲ್ಲ. ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಸೋಂಕು ಬಾಧಿಸಿದ್ದು, 111 ಜನರಿಗೆ ಈವರೆಗೆ ದೃಢಪಡಿಸಲಾಗಿದೆ. ಈ ಪೈಕಿ 106 ಮಂದಿಗೆ ನೆಗೆಟಿವ್ ಆಗಿದೆ.  ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

              ಕಳೆದ 24 ಗಂಟೆಗಳಲ್ಲಿ 63,901 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ. 6.81 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,35,78,641 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

            ಕಳೆದ 24 ಗಂಟೆಗಳಲ್ಲಿ  18 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4728 ಕ್ಕೆ ಏರಿಕೆಯಾಗಿದೆ.  

        ಇಂದು, ಸೋಂಕು ಪತ್ತೆಯಾದವರಲ್ಲಿ 173 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 3858 ಮಂದಿ ಜನರಿಗೆ ಸೋಂಕು ತಗಲಿತು. 297 ಮಂದಿಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 617, ಕೋಝಿಕೋಡ್ 439, ತಿರುವನಂತಪುರ 329, ತ್ರಿಶೂರ್ 384, ಮಲಪ್ಪುರಂ 343, ಕಣ್ಣೂರು 252, ಕೊಟ್ಟಾಯಂ 290, ಕೊಲ್ಲಂ 274, ಆಲಪ್ಪುಳ 236, ಕಾಸರಗೋಡು 211, ಪಾಲಕ್ಕಾಡ್ 81, ವಯನಾಡ್ 166, ಪತ್ತನಂತಿಟ್ಟು 125, ಇಡುಕ್ಕಿ 111 ಎಂಬಂತೆ ಸ|ಂಪರ್ಕದಿಂದ ಸೋಂಕು ಬಾಧಿಸಿದೆ. 

               ಇಂದು ಇಪ್ಪತ್ತೈದು ಮಂದಿ  ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ.  ಕಣ್ಣೂರು 6, ಕೊಲ್ಲಂ, ಕೊಟ್ಟಾಯಂ, ಕಾಸರಗೋಡು ತಲಾ 4, ಎರ್ನಾಕುಳಂ, ಪಾಲಕ್ಕಾಡ್ ತಲಾ 2, ತಿರುವನಂತಪುರ, ಪತ್ತನಂತಿಟ್ಟು ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2205 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 143, ಕೊಲ್ಲಂ 206, ಪತ್ತನಂತಿಟ್ಟು 82, ಆಲಪ್ಪುಳ 119, ಕೊಟ್ಟಾಯಂ 165, ಇಡಕ್ಕಿ 39, ಎರ್ನಾಕುಳಂ 137, ತ್ರಿಶೂರ್ 202, ಪಾಲಕ್ಕಾಡ್ 60, ಮಲಪ್ಪುರಂ 249, ಕೋಝಿಕ್ಕೋಡ್  391, ವಯನಾಡ್ 37, ಕಣ್ಣೂರು 227, ಕಾಸರಗೋಡು 148 ಎಂಬಂತೆ ನೆಗೆಟಿವ್ ಆಗಿದೆ.  ಇದರೊಂದಿಗೆ, 33,621 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,10,283 ಮಂದಿ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,55,683 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,50,535 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 5148 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 759 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

               ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 363  ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries