HEALTH TIPS

ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್: 6194 ಮಂದಿಗೆ ಇಂದು ಪಾಸಿಟಿವ್

                                                              

             ತಿರುವನಂತಪುರ: ರಾಜ್ಯದಲ್ಲಿ ಇಂದು 6194 ಜನರಿಗೆ ಕೋವಿಡ್ -19 ಖಚಿತಪಡಿಸಲಾಲಾಗಿದೆ. ಎರ್ನಾಕುಳಂ 977, ಕೋಝಿಕೋಡ್ 791, ತಿರುವನಂತಪುರ 550, ಮಲಪ್ಪುರಂ 549, ತ್ರಿಶೂರ್ 530, ಕಣ್ಣೂರು 451, ಆಲಪ್ಪುಳ 392, ಕೊಟ್ಟಾಯಂ 376, ಕೊಲ್ಲಂ 311, ಪಾಲಕ್ಕಾಡ್ 304, ಕಾಸರಗೋಡು 286, ಪತ್ತನಂತಿಟ್ಟು 256, ಇಡುಕ್ಕಿ 230, ವಯನಾಡ್ 191 ಎಂಬಂತೆ ಸೋಂಕು ಬಾಧಿಸಿದೆ. 


     ಕಳೆದ  24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ -19  ಖಚಿತಪಡಿಸಿಲ್ಲ. ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ನಿಂದ ಆಗಮಿಸಿದ ಒಟ್ಟು 111 ಜನರಿಗೆ  ಈವರೆಗೆ ಕೋವಿಡ್ ದೃಢಪಡಿಸಲಾಗಿದೆ. ಈ ಪೈಕಿ 107 ಮಂದಿಗಳಿಗೆ  ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

             ಕಳೆದ 24 ಗಂಟೆಗಳಲ್ಲಿ 61,957 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ|. 10 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,37,03,838 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

               ಕಳೆದ 24 ಗಂಟೆಗಳಲ್ಲಿ  17 ಮಂದಿ ಕೋವಿಡ್ ನಿಂದ ಮೃತಪಟ್ಟಿರುವುದು ಖಚಿತಪಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ   4767 ಕ್ಕೆ ಏರಿಕೆಯಾಗಿದೆ. 

            ಇಂದು, ಸೋಂಕು ಪತ್ತೆಯಾದವರಲ್ಲಿ 171 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 5596 ಮಂದಿ ಜನರಿಗೆ ಸೋಂಕು ತಗಲಿತು. 404 ಮಂದಿಗಳ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 956, ಕೋಝಿಕೋಡ್ 778, ತಿರುವನಂತಪುರ 398, ಮಲಪ್ಪುರಂ 528, ತ್ರಿಶೂರ್ 509, ಕಣ್ಣೂರು 357, ಆಲಪ್ಪುಳ  385, ಕೊಟ್ಟಾಯಂ 349, ಕೊಲ್ಲಂ 301, ಪಾಲಕ್ಕಾಡ್ 140, ಕಾಸರಗೋಡು 260, ಪತ್ತನಂತಿಟ್ಟು 228, ಇಡುಕ್ಕಿ 220, ವಯನಾಡ್ 187 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

             ಇಂದು 23 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರಿನಲ್ಲಿ 11, ಕೋಝಿಕ್ಕೋಡ್ 3, ಕೊಲ್ಲಂ ಮತ್ತು ಕಾಸರಗೋಡಿನಲ್ಲಿ ತಲಾ 2, ತಿರುವನಂತಪುರ, ಪತ್ತನಂತಿಟ್ಟು, ಎರ್ನಾಕುಳಂ, ತ್ರಿಶೂರ್ ಮತ್ತು ವಯನಾಡದಲ್ಲಿ ತಲಾ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2584 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 247, ಕೊಲ್ಲಂ 232, ಪತ್ತನಂತಿಟ್ಟು 51, ಆಲಪ್ಪುಳ 129, ಕೊಟ್ಟಾಯಂ 160, ಇಡುಕ್ಕಿ 95, ಎರ್ನಾಕುಳಂ 139, ತ್ರಿಶೂರ್ 218, ಪಾಲಕ್ಕಾಡ್ 205, ಮಲಪ್ಪುರಂ 304, ಕೋಝಿಕೋಡ್ 301, ವಯನಾಡ್ 71, ಕಣ್ಣೂರು 274, ಕಾಸರಗೋಡು 154 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 39,778 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,15,342 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,64,894 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,58,988 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 5906 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 982 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

                  ಇಂದು 17 ಹೊಸ ಹಾಟ್‍ಸ್ಪಾಟ್‍ಗಳಿವೆ.  3 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 382 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries