ಜನಸಾಮಾನ್ಯರ ಹಣ್ಣು ಎಂದೇ ಖ್ಯಾತವಾಗಿರುವ ಹಲಸಿನ ವಿವಿಧ ತಳಿಗಳನ್ನು, ಸ್ಥಳೀಯ ವೈವದ್ಯತೆಗಳನ್ನೂ ನಾವೆಲ್ಲ ನೋಡಿರುತ್ತೇವೆ. ಆದರೆ ಇದೀಗ ಕುತೂಹಲಕಾರಿ ಸಂಗತಿಯೆಂದರೆ ಕೆಂಪು ಹಲಸು ಕಂಡುಬಂದಿರುವುದು! ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಶ್ರೀಜಿತ್ ಮೂತೇಡಾಥ್ ಅವರು ವಿಚಿತ್ರ ಹಾಸ್ಯವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಈ ಕೆಂಪು ಅತಿಥಿ ಮನೆಯಲ್ಲಿ ಮತ್ತು ಫೇಸ್ಬುಕ್ನಲ್ಲಿ ಅಲ್ಪಾವಧಿಯಲ್ಲಿಯೇ ವೈರಲ್ ಆಗಿದೆ.
ಕಳೆದ ಲಾಕ್ ಡೌನ್ ಅವಧಿಯಲ್ಲಿ ಕೇರಳೀಯರು ಹಲಸನ್ನು ತಿಂದು ಬದುಕಿದರೆಂಬ ಉಕ್ತಿ ಚಾಲ್ತಿಯಲ್ಲಿದೆ. ಈ ವರ್ಷವೂ ಹಲಸು ಋತುವಿನ ಆರಂಭದೊಂದಿಗೆ, ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಉತ್ತಮ ಫಸಲನ್ನು ಕಾಣುತ್ತಿದೆ. ಅಷ್ಟರಲ್ಲಿ ಕೆಂಪು ಹಲಸು ಸುದ್ದಿಯಾಗುತ್ತಿದೆ. ಇದು ಹೆಚ್ಚು ಜನಪ್ರಿಯತೆ ಗಳಿಸದ ತಳಿತಯಾಗಿರುವುದರಿಂದ ಇದೀಗ ಈ ವರ್ಗದ ಹುಡುಕಾಟದಲ್ಲಿ ಅನೇಕರು ನಿರತರಾಗಿದ್ದಾರೆ.
ಶ್ರೀಜಿತ್ ಅವರು ಸಸಿಗಳನ್ನು ಚೋವೂರ್ನ ನರ್ಸರಿಯಿಂದ ಖರೀದಿಸಿದ್ದರು. ಇದು ಕೆಂಪು ಹಲಸು ಎಂದು ನರ್ಸರಿ ಸಿಬ್ಬಂದಿ ಹೇಳಿದ್ದರು. ಆದರೆ ಅರ್ಧದಷ್ಟು ಜನರು ಅದನ್ನು ನಂಬಿರಲಿಲ್ಲ ಎಂದು ಶ್ರೀಜಿತ್ ಹೇಳುತ್ತಾರೆ. ಅಂಗಳದಲ್ಲಿ ಅದರೊಂದಿಗೆ ನೆಟ್ಟಿರುವ ಅಂಜೂರದ ಮರದ ನೆರಳಿನಲ್ಲಿ, ಅದರ ಬೆಳವಣಿಗೆ ಅಲ್ಪ ಕುಂಠಿತಗೊಂಡಿತು, ಆದರೆ ಈ ಬಾರಿ ಅದು ಫಲವನ್ನು ನೀಡಿತು. ಶ್ರೀಜಿತ್ ಅವರ ಪೆÇೀಸ್ಟ್ ಮೊದಲ ಫಳದ ಚಿತ್ರದೊಂದಿಗೆ ಬಿತ್ರಗೊಂಡು ಕುತೂಹಲ ಮೂಡಿಸಿದೆ.