ಕಾಸರಗೋಡು: ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ನೌಕರರ ಮುಷ್ಕರದ ಬಿಸಿ ಕಾಸರಗೋಡಿನ ಪ್ರಯಾಣಿಕರನ್ನೂ ಬಾಧಿಸಿದೆ. ಅಂತಾರಾಜ್ಯ ಸಂಪರ್ಕದ ಬಸ್ಗಳನ್ನು ಆಶ್ರಯಿಸಿಕೊಂಡಿದ್ದ ಹಲವಾರು ಮಂದಿ ಪರದಾಡಬೇಕಾಯಿತು.ಕಾಸರಗೋಡಿನಿಂದ ಪುತ್ತೂರು, ಸುಳ್ಯ, ಮಂಗಳೂರು ತೆರಳುವ ಬಸ್ಗಳಲ್ಲದೆ ಮಂಗಳೂರು-ಮಲ್ಲ ಮಧ್ಯೆ ಸಂಚರಿಸುವ ಬಸ್ಗಳೂ ಸಂಚಾರ ಸ್ಥಗಿತಗೊಳಿಸಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 50ಕ್ಕೂ ಹೆಚ್ಚು ಬಸ್ಗಳು ಜಿಲ್ಲೆಯ ನಾನಾ ಕಡೆ ಸಂಚಾರ ನಡೆಸುತ್ತಿದೆ. ಕಾಸರಗೋಡು-ಮಂಗಳೂರು ಹಾದಿಯಲ್ಲಿ 37, ಕಾಸರಗೋಡು-ಸುಳ್ಯ ಮಧ್ಯೆ 3, ಕಾಸರಗೋಡು-ಪುತ್ತೂರು ಮಧ್ಯೆ 15ಬಸ್ಗಳು ಸಂಚಾರ ನಡೆಸುತ್ತಿದೆ. ಒಂದೆರಡು ದಿವಸಗಳಲ್ಲಿ ಮುಷ್ಕರ ಕೊನೆಗೊಳ್ಳದಿದ್ದಲ್ಲಿ, ಈ ರೂಟಲ್ಲಿ ಕೇರಳ ರಸ್ತೆಸಾರಿಗೆ ನಿಗಮದ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.