HEALTH TIPS

ಕರ್ನಾಟಕ ಸಾರಿಗೆ ನೌಕರರ ಮುಷ್ಕರ-ಕಾಸರಗೋಡಿನ ಪ್ರಯಾಣಿಕರಿಗೂ ಸಂಕಷ್ಟ

              ಕಾಸರಗೋಡು: ಕರ್ನಾಟಕ ರಾಜ್ಯ ರಸ್ತೆಸಾರಿಗೆ ನಿಗಮದ ನೌಕರರ ಮುಷ್ಕರದ ಬಿಸಿ ಕಾಸರಗೋಡಿನ ಪ್ರಯಾಣಿಕರನ್ನೂ ಬಾಧಿಸಿದೆ. ಅಂತಾರಾಜ್ಯ ಸಂಪರ್ಕದ ಬಸ್‍ಗಳನ್ನು ಆಶ್ರಯಿಸಿಕೊಂಡಿದ್ದ ಹಲವಾರು ಮಂದಿ ಪರದಾಡಬೇಕಾಯಿತು.ಕಾಸರಗೋಡಿನಿಂದ ಪುತ್ತೂರು, ಸುಳ್ಯ, ಮಂಗಳೂರು ತೆರಳುವ ಬಸ್‍ಗಳಲ್ಲದೆ  ಮಂಗಳೂರು-ಮಲ್ಲ ಮಧ್ಯೆ ಸಂಚರಿಸುವ ಬಸ್‍ಗಳೂ ಸಂಚಾರ ಸ್ಥಗಿತಗೊಳಿಸಿತ್ತು.  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 50ಕ್ಕೂ ಹೆಚ್ಚು ಬಸ್‍ಗಳು ಜಿಲ್ಲೆಯ ನಾನಾ ಕಡೆ ಸಂಚಾರ ನಡೆಸುತ್ತಿದೆ. ಕಾಸರಗೋಡು-ಮಂಗಳೂರು ಹಾದಿಯಲ್ಲಿ 37, ಕಾಸರಗೋಡು-ಸುಳ್ಯ ಮಧ್ಯೆ 3, ಕಾಸರಗೋಡು-ಪುತ್ತೂರು ಮಧ್ಯೆ 15ಬಸ್‍ಗಳು ಸಂಚಾರ ನಡೆಸುತ್ತಿದೆ. ಒಂದೆರಡು ದಿವಸಗಳಲ್ಲಿ ಮುಷ್ಕರ ಕೊನೆಗೊಳ್ಳದಿದ್ದಲ್ಲಿ, ಈ ರೂಟಲ್ಲಿ ಕೇರಳ ರಸ್ತೆಸಾರಿಗೆ ನಿಗಮದ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries