HEALTH TIPS

ಕೊರೋನಾ; ಪಡಿತರ ಅಂಗಡಿಗಳ ಚಟುವಟಿಕೆಗಳ ಸಮಯದಲ್ಲಿ ಬದಲಾವಣೆ

                                          

          ತಿರುವನಂತಪುರ: ರಾಜ್ಯದಲ್ಲಿ ಪಡಿತರ ಅಂಗಡಿಗಳ ಕಾರ್ಯಚಟುವಟಿಕೆಗಳ  ಸಮಯದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇಂದಿನಿಂದ, ಪಡಿತರ ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಅಪರಾಹ್ನ 2 ರಿಂದ ಸಂಜೆ 5 ರವರೆಗೆ ತೆರೆದಿರುತ್ತವೆ. ಕೊರೋನಾ ಪ್ರಸರಣ ತೀವ್ರಗೊಳ್ಳುತ್ತಿದ್ದಂತೆ ಇಂತಹ ಕ್ರಮ ಕೈಗೊಳ್ಳಲಾಗಿದೆ. 

         ಇದೇ ವೇಳೆ ಕಂಟೋನ್ಮೆಂಟ್ ವಲಯಗಳಲ್ಲಿನ ಪಡಿತರ ಅಂಗಡಿಗಳ ವೇಳಾಪಟ್ಟಿ ವಿಭಿನ್ನವಾಗಿರುತ್ತದೆ. ಜಿಲ್ಲಾಧಿಕಾರಿ ಸೂಚಿಸಿದಾಗ ಮಾತ್ರ ಪಡಿತರ ಅಂಗಡಿಗಳನ್ನು ನಿರ್ವಹಿಸಲು ಅವಕಾಶವಿದೆ.

             ರಾಜ್ಯದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ತೀವ್ರಗೊಳ್ಳುತ್ತಿದೆ. ಈ ಮೊದಲು, ಸೋಂಕು ಹರಡುವಿಕೆಯ ದೃಷ್ಟಿಯಿಂದ ಬ್ಯಾಂಕು ಗಳ ಕಾರ್ಯಾಚರಣೆಯ ಸಮಯವನ್ನು ಬದಲಾಯಿಸಲಾಗಿತ್ತು. ಕೇರಳದಲ್ಲಿ ಭಾನುವಾರ 28,469 ಕೊರೊನಾ ಪ್ರಕರಣಗಳನ್ನು ದೃಢಪಡಿಸಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries