HEALTH TIPS

ಕೇರಳದ 15ನೇ ವಿಧಾನ ಸಭೆಯ ಮೊದಲ ಅಧಿವೇಶನ ಇಂದಿನಿಂದ



 
       ತಿರುವನಂತಪುರ: ಕೇರಳದ 15 ನೇ  ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಲಿದರ.  53 ಹೊಸಬರು ಸೇರಿದಂತೆ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಮೂಲಕ ವಿಧಾನಸಭೆ ಪ್ರಾರಂಭವಾಗಲಿದೆ.  ಹಂಗಾಮಿ ಸ್ಪೀಕರ್ ಪಿಟಿಎ ರಹೀಮ್ ಪ್ರಮಾಣವಚನ ಬೋಧಿಸುವರು.  ಪಿಣರಾಯಿ ವಿಜಯನ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ನಿರ್ಣಯವೂ ಇಂದು ನಡೆಯಲಿದೆ.
      ಹೊಸ ಶಾಸಕರ ಪ್ರಮಾಣವಚನವು ಅವರ ಹೆಸರಿನ ಮೊದಲ ಅಕ್ಷರದ ಆಧಾರದಲ್ಲಿ ವರ್ಣಮಾಲೆಯನುಸಾರ ನಡೆಯುತ್ತದೆ.  ಮತ್ತೊಂದು ವೈಶಿಷ್ಟ್ಯವೆಂದರೆ ಪಿಣರಾಯಿ ವಿಜಯನ್ ಅವರನ್ನು ಎದುರಿಸಲು ಪ್ರತಿಪಕ್ಷದ ಹೊಸ ನಾಯಕರಾಗಿ ವಿ.ಡಿ.ಸತೀಶನ್ ಇಂದು ಅಧಿಕಾರ ಸ್ವೀಕರಿಸುವರು.   ಸದನದ ಸ್ಪೀಕರ್ ಆಯ್ಕೆ ನಾಳೆ  ನಡೆಯಲಿದೆ.  ಎಂ.ಬಿ.ರಾಜೇಶ್ ಅವರು ಎಡಪಂಥೀಯ ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ.

       ರಾಜ್ಯಪಾಲರು ಈ ತಿಂಗಳ 28 ರಂದು ಸದನದಲ್ಲಿ  ಭಾಷಣ ಮಾಡಲಿದ್ದಾರೆ.  ಎರಡನೇ ಪಿಣರಾಯಿ ಸರ್ಕಾರ ಜೂನ್ 4 ರಂದು ತನ್ನ ಬಜೆಟ್ ಮಂಡಿಸಲಿದೆ.  ಹೊಸ ಹಣಕಾಸು ಸಚಿವರಾದ ಕೆ.ಎನ್. ಬಾಲಗೋಪಾಲ್ ಅವರು ಹಿಂದಿನ ಸಚಿವ ಥಾಮಸ್ ಐಸಾಕ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.  ಅಧಿವೇಶನ ಜೂ.  14 ರ ಸಂಜೆ ರವರೆಗೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries