ಎಡಪಕ್ಷ ಸಿಪಿಐ ಮತ್ತೊಮ್ಮೆ ಕೇರಳದೆಲ್ಲೆಡೆ ಕೆಂಪು ಬಾವುಟವನ್ನು ಹಾರಿಸುತ್ತಿದೆ. ಕೇರಳದ 140 ಸ್ಥಾನಗಳಿಗೆ ಮಲಪ್ಪುರಂ ಉಪ ಚುನಾವಣೆ ಏಪ್ರಿಲ್ 6 ರಂದು ಮತದಾನ ನಡೆದಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಿದೆ. ಸಿಎಂ ಪಿಣರಾಯಿ ವಿಜಯನ್ ಅವರು 40 ವರ್ಷದಲ್ಲಿ ಯಾವೊಬ್ಬ ಎಡಪಕ್ಷ ನಾಯಕರು ಮಾಡದ ಸಾಧನೆಯನ್ನು ಈ ಬಾರಿ ದಾಖಲಿಸಿದ್ದಾರೆ. ಎರಡನೇ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು. ಅದರಂತೆ, ಎಲ್ ಡಿ ಎಫ್ ಮುನ್ನಡೆ ಕಾಯ್ದುಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಮ್ಯಾಜಿಕ್ ನಂಬರ್ 71 ದಾಟಿ ಮುನ್ನುಗ್ಗಿದೆ. ಈ ಸಮಯಕ್ಕೆ ಎಲ್ ಡಿ ಎಫ್ 100, ಯು ಡಿಎಫ್ 40 ಸ್ಥಾನ ಗಳಿಸಿದ್ದರೆ, ಎನ್ ಡಿ ಎ ಯಾವುದೇ ಸ್ಥಾನ ಗೆದ್ದಿಲ್ಲ, ಇತರೆ ಕೂಡಾ ಗೆಲುವು ದಾಖಲಿಸಿಲ್ಲ. ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು ಕೂಡಾ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.
2021ರ ಚುನಾವಣೆಯಲ್ಲಿ ಸೋತ ಪ್ರಮುಖರು, ಕ್ಷೇತ್ರ ವಿವರ ಇಲ್ಲಿದೆ:
ಸೋತವರು
* ಕೆ ಸುರೇಂದ್ರನ್-ಮಂಜೇಶ್ವರ- ಎನ್ ಡಿ ಎ
* ಇ ಶ್ರೀಧರನ್-ಪಾಲಕ್ಕಾಡ್- ಎನ್ ಡಿಎ
* ಸುರೇಶ್ ಗೋಪಿ-ತ್ರಿಸ್ಸೂರ್- ಎನ್ ಡಿಎ
* ಪಿ. ಸಿ ಜಾರ್ಜ್ -ಪೂಂಜಾರ್- ಪಕ್ಷೇತರ
* ಶೋಭಾ ಸುರೇಂದ್ರನ್ -ಕಾಳಕೂಟಮ್-ಎನ್ ಡಿ ಎ
* ಜಿ ಕೃಷ್ಣಕುಮಾರ್- ತಿರುವನಂತಪುರಂ-ಎನ್ ಡಿ ಎ
* ಕುಮ್ಮನಂ ರಾಜಶೇಖರನ್-ನೇಮಂ-ಬಿಜೆಪಿ
* ಧರ್ಮರಾಜನ್ ಬೊಲ್ಗಟ್ಟಿ-ಬಾಲುಚ್ಚೇರಿ-ಕಾಂಗ್ರೆಸ್
* ಜೋಸ್ ಕೆ ಮಣಿ-ಕೆಸಿ(ಎಂ)-(ಎಲ್ ಡಿ ಎಫ್)
* ಎಂ.ಟಿ ರಮೇಶ್- ಕೋಳಿಕ್ಕೋಡ್ ಉತ್ತರ -ಬಿಜೆಪಿ
* ಜೆ ಮರ್ಸಿಕುಟ್ಟಿ ಅಮ್ಮ-ಕುಂದರಾ-ಸಿಪಿಎಂ(ಎಲ್ ಡಿ ಎಫ್)
* ಎಸ್ ಶರತ್-ಚೆರ್ತಲಾ-ಕಾಂಗ್ರೆಸ್(ಯು ಡಿಎಫ್)
ಗೆದ್ದವರು
* ಧರ್ಮದಂ- ಪಿಣರಾಯಿ ವಿಜಯನ್ -ಸಿಪಿಎಂ(ಎಲ್ ಡಿ ಎಫ್)
* ಪಿ.ಜೆ ಜೋಸೆಫ್-ತೊಡುಪುಳ-ಕೆಸಿ(ಯುಡಿಎಫ್)
* ಕೆ.ಕೆ ರಮಾ-ವಟಕ್ಕಾರ-ಆರ್ ಎಂ ಪಿ(ಯುಡಿಎಫ್)
* ಮಣಿ ಸಿ ಕಪ್ಪನ್-ಪಾಲ- ಎನ್ ಸಿ ಕೆ(ಯುಡಿಎಫ್)
* ಉಮ್ಮನ್ ಚಾಂಡಿ-ಕಾಂಗ್ರೆಸ್-ಪುಥುಪಲ್ಲಿ
* ವಿ.ಕೆ ಪ್ರಸಾಂತ್- ವಟ್ಟಿಯೂರುಕಾವು-ಸಿಪಿಎಂ(ಎಲ್ ಡಿ ಎಫ್)
* ಕೆಟಿ ಜಲೀಲ್- ಥವನೂರ್- ಎಲ್ ಡಿ ಎಫ್
* ಕೆಕೆ ಶೈಲಜಾ-ಮಟ್ಟನೂರು- ಎಲ್ ಡಿ ಎಫ್
* ಕೆ ಯು ಜನೀಶ್ ಕುಮಾರ್-ಕೊನ್ನಿ-ಎಲ್ ಡಿ ಎಫ್
* ತಿರುವಾಂಚೂರ್ ರಾಧಾಕೃಷ್ಣನ್-ಕೊಟ್ಟಾಯಂ- ಯುಡಿಎಫ್
* ಎಂ ಮುಖೇಶ್-ಕೊಲ್ಲಂ-ಸಿಪಿಎಂ(ಎಲ್ ಡಿ ಎಫ್)
* ರಮೇಶ್ ಚೆನ್ನಿತಲ-ಹರಿಪದ್-ಕಾಂಗ್ರೆಸ್(ಯು ಡಿಎಫ್)
* ಯು ಪ್ರತಿಭಾ-ಕಯಾಂಕುಲಂ-ಸಿಪಿಎಂ(ಎಲ್ ಡಿ ಎಫ್)
* ಎಂಎಂ ಮಣಿ-ಉದಂಬಂಚೋಲ್-ಸಿಪಿಎಂ(ಎಲ್ ಡಿ ಎಫ್)
* ಪಿ.ವಿ ಅನ್ವರ್-ನೀಲಂಬೂರ್-ಪಕ್ಷೇತರ (ಎಲ್ ಡಿ ಎಫ್)