HEALTH TIPS

ಕೋವಿಡ್ ಸಂಕಷ್ಟ: ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿಂದ ನಿಧಿ ಮಂಜೂರು: ಕೇರಳಕ್ಕೆ 240 ಕೋಟಿ ರೂ

                                                 

                ನವದೆಹಲಿ: ಕೊರೋನಾ ತಡೆಗಟ್ಟುವ ಚಟುವಟಿಕೆಗಳಿಂದಾಗಿ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸ್ಥಳೀಯ ಸಂಸ್ಥೆಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದೆಬಂದಿದೆ. ಪಂಚಾಯಿತಿಗಳಿಗೆ ನೀಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರವು ಇÀದೀಗ ಮಂಜೂರು ಮಾಡಿದೆ. 25 ರಾಜ್ಯಗಳಿಗೆ `8923.8 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೊರೋನಾ ವೈರಸ್ ಪೀಡಿತ 25 ರಾಜ್ಯಗಳಲ್ಲಿ ಪಂಚಾಯಿತಿಗಳಿಗೆ ಕೇಂದ್ರವು ಆರ್ಥಿಕ ನೆರವು ಘೋಷಿಸಿದೆ. ಇದರಲ್ಲಿ ಕೇರಳಕ್ಕೆ `240.6 ಕೋಟಿ ಸಿಗಲಿದೆ.


 

             ಕೇರಳಕ್ಕೆ ಪರಿಹಾರ ನೀಡಿರುವ ಬಗ್ಗೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿರುವರು. ಈ ಹಿಂದೆ ಕೇರಳದ ಆರು ಜಿಲ್ಲೆಗಳಲ್ಲಿ ಕೊರೋನಾ ವೇಗವಾಗಿ ಹರಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಕೇರಳದಲ್ಲಿ, ಕೋಝಿಕೋಡ್, ಎರ್ನಾಕುಳಂ, ಮಲಪ್ಪುರಂ, ತ್ರಿಶೂರ್, ಕೊಟ್ಟಾಯಂ, ಆಲಪ್ಪುಳ ಜಿಲ್ಲೆಗಳಲ್ಲಿ ಕೋವಿಡ್ ವೈರಸ್ ಹೆಚ್ಚು ವ್ಯಾಪಕವಾಗಿದೆ. ಇದಲ್ಲದೆ, 13 ಜಿಲ್ಲೆಗಳಲ್ಲಿ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣವು ಶೇಕಡಾ 20 ಕ್ಕಿಂತ ಹೆಚ್ಚಿರುವುದರಿಂದ ಕೇರಳ ಹೆಚ್ಚು ಜಾಗರೂಕರಾಗಿರಬೇಕು ಎಂದು ಕೇಂದ್ರ ಪುನರುಚ್ಚರಿಸಿದೆ.

                 ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,03,738 ಜನರಿಗೆ ಸೋಂಕು ಪತ್ತೆಯಾಗಿದೆ. ಇದು ದೇಶದ ಒಟ್ಟು ಪ್ರಕರಣಗಳ ಸಂಖ್ಯೆಯನ್ನು 2,22,96,414 ಕ್ಕೆ ಏರಿಸಿದೆ. ಗುಣಪಟ್ಟವರ ದರದಲ್ಲಿ ಏರಿಕೆ ಕಾಣುತ್ತಿದೆ. ಈವರೆಗೆ 1,83,17,404 ಜನರನ್ನು ಗುಣಪಡಿಸಲಾಗಿದೆ. ನಿನ್ನೆ 3,86,444 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ, ದೇಶದ ವಿವಿಧ ಭಾಗಗಳಲ್ಲಿ 37,36,648 ಮಂದಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

                 ದೇಶದ ಶೇ.72 ರಷ್ಟು ದೈನಂದಿನ ಪ್ರಕರಣಗಳು 10 ರಾಜ್ಯಗಲಲ್ಲಿವೆ. ಮಹಾರಾಷ್ಟ್ರ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ರೋಗಿಗಳಿದ್ದು, ಎರಡನೇ ಸ್ಥಾನದಲ್ಲಿದ್ದರೆ, ಕೇರಳ ಮೂರನೇ ಅತಿ ಹೆಚ್ಚು ರೋಗಿಗಳಿರುವ ರಾಜ್ಯವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries